ಬೆಂಗಳೂರು,ಫೆ.5-
‘ಕನ್ನಡದಲ್ಲಿ ಹೇಳಪ್ಪಾ’ ಎಂದ ಕನ್ನಡಿಗ ಗ್ರಾಹಕನ ಮೇಲೆ ಬಿಹಾರ (Bihar) ಮೂಲದ ವ್ಯಾಪಾರಿ ಬಾಟಲಿನಿಂದ ಹಲ್ಲೆ ಮಾಡಿರುವ ಘಟನೆ ಚೆನ್ನಮ್ಮನ ಕೆರೆ (Chennammana Kere) ಪೊಲೀಸ್ ಠಾಣಾ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ ನಡೆದಿದೆ. ಭುವನೇಶ್ವರಿ ನಗರದ ತಾಜ್ ಜ್ಯೂಸ್ ಶಾಪ್ ಗೆ ಹೋಗಿದ್ದ ದೀಪಕ್ ಹಲ್ಲೆಗೊಳಗಾದವರು. ಕಳೆದ ತಿಂಗಳ 31ರ ರಾತ್ರಿ 7:30 ಕ್ಕೆ ಐಸ್ ಕ್ರೀಂ ತಿನ್ನಲು ತಾಜ್ ಅಂಗಡಿಗೆ ದೀಪಕ್ ಹೋಗಿದ್ದರು.
ಐಸ್ ಕ್ರೀಂ ತಿಂದಾದ ಮೇಲೆ ಹಣ ಎಷ್ಟು ಎಂದು ದೀಪಕ್ ಕೇಳಿದಾಗ, ವ್ಯಾಪಾರಿ ಶಬ್ಬೀರ್ ಹಿಂದಿಯಲ್ಲಿ ಐಸ್ ಕ್ರೀಂ ಬೆಲೆ ತಿಳಿಸಿದ್ದ. ಆದರೆ ದೀಪಕ್ಗೆ ಹಿಂದಿ ಬರದ ಕಾರಣ, ಕನ್ನಡಲ್ಲಿ ಹೇಳಪ್ಪ ಎಂದು ಕೇಳಿಕೊಂಡಿದ್ದಾನೆ. ಇಷ್ಟಕ್ಕೇ ಸಿಟ್ಟಾದ ಶಬ್ಬೀರ್, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಮೂಲಕ ಗಲಾಟೆ ಶುರುವಾಗಿದ್ದು, ನಂತರ ದೀಪಕ್ ಮುಖಕ್ಕೆ ಶಬ್ಬೀರ್ ಪೆಪ್ಸಿ ಬಾಟಲಿನಿಂದ ಹಲ್ಲೆ ನಡೆಸಿದ್ದ. ಹಲ್ಲೆಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು ಹಲ್ಲೆಯಿಂದ ಪ್ರಜ್ಞೆ ತಪ್ಪಿದ ದೀಪಕ್ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಆತನಿಗೆ ಎರಡು ಶಸ್ತ್ರಚಿಕಿತ್ಸೆಗಳನ್ನು ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಕೃತ್ಯದ ಬಗ್ಗೆ ದೀಪಕ್ ಪೋಷಕರು ಚೆನ್ನಮ್ಮನ ಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

1 ಟಿಪ್ಪಣಿ
We Help You Hole Apartments In Dubai Quickly And Safely.
See The Most appropriate Deals, Prime Locations,
And Enormously Stand From Our Experts.