Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಕೈಲಾಸವಾಸಿಯಾದ ‘ಕಲೈವಾಣಿ’
    ಸಿನೆಮ

    ಕೈಲಾಸವಾಸಿಯಾದ ‘ಕಲೈವಾಣಿ’

    vartha chakraBy vartha chakraಫೆಬ್ರವರಿ 4, 2023Updated:ಮಾರ್ಚ್ 20, 202390 ಪ್ರತಿಕ್ರಿಯೆಗಳು3 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಎರಡು ದಿನಗಳ ಹಿಂದಷ್ಟೇ ಭಾರತೀಯ ಚಿತ್ರರಂಗ “ಕಲಾ ತಪಸ್ವಿ”ಯನ್ನು ಕಳೆದುಕೊಂಡಿತ್ತು. ಇಂದು, ಅಂದರೆ ಫೆಬ್ರವರಿ 4, 2023 ರಂದು ಮತ್ತೊಬ್ಬ ಅಮೋಘ ಕಲಾವಿದೆ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ, ಇಂಪಿನ ಕಂಠದ ಗಾಯಕಿ “ವಾಣಿ ಜಯರಾಮ್” ಅವರನ್ನು ಕಳೆದುಕೊಂಡು ಬಡವಾಗಿದೆ.

    ಚೆನ್ನೈನ ನುಂಗಂಬಕ್ಕಂ (Nungambakkam, Chennai) ನಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ಅವರು ವಾಸಿಸುತ್ತಿದ್ದರು. 2018 ರಲ್ಲಿ ಪತಿ ಜಯರಾಮ್ ಅವರನ್ನು ಕಳೆದುಕೊಂಡ ಮೇಲೆ ಅವರು ಒಂಟಿ ಜೀವನವನ್ನು ನಡೆಸುತ್ತಿದ್ದರು. ಶನಿವಾರದಂದು ಎಂದಿನಂತೆ ಮನೆಯ ಕೆಲಸದ ಸಹಾಯಕಿ ಮನೆಯ ಬಾಗಿಲನ್ನು ತಟ್ಟಿದ್ದಾರೆ. ಆದರೆ ಕೆಲ ಸಮಯದ ನಂತರವೂ ಯಾವುದೇ ಪ್ರತಿಕ್ರಿಯೆ ಬರದಿದ್ದ ಕಾರಣ ಅವರಿಗೆ ತಿಳಿದಿದ್ದ ವಾಣಿ ಜಯರಾಮ್ ಅವರ ಸಂಬಂಧಿಕರಿಗೆ ತಿಳಿಸಿದ್ದಾರೆ. ಪೊಲೀಸರಿಗೆ ತಿಳಿಸಿದ ಸಂಬಂಧಿಕರು ವಾಣಿಯವರ ಮನೆಗೆ ಧಾವಿಸಿದ್ದಾರೆ. ಸಂಬಂಧಿಕರ ಎದುರಿನಲ್ಲಿ ಬಾಗಿಲನ್ನು ಒಡೆದಾಗ, ವಾಣಿ ಜಯರಾಮ್ ನಿಧನ ಹೊಂದಿದ ವಿಷಯ ಗೊತ್ತಾಗಿದೆ. ಅವರಿಗೆ 77 ವರ್ಷಗಳಾಗಿತ್ತು.

    ಅವರ ಬಾಲ್ಯ ಹೇಗಿತ್ತು? 

    ವಾಣಿ ಜಯರಾಮ್ ಅವರು 30 ನವೆಂಬರ್ 1945 ರಲ್ಲಿ, ತಮಿಳುನಾಡಿನ ವೆಲ್ಲೂರಿನಲ್ಲಿ (Vellore, TamilNadu) ಜನಿಸಿದರು. ಆರು ಹೆಣ್ಣುಮಕ್ಕಳು ಮತ್ತು ಮೂವರು ಗಂಡುಮಕ್ಕಳ ಕುಟುಂಬದಲ್ಲಿ ಐದನೇ ಮಗಳಾಗಿ ಜನಿಸಿದ ಇವರ ಮೊದಲ ಹೆಸರು ಕಲೈವಾಣಿ. 8 ನೇ ವಯಸ್ಸಿನಲ್ಲಿ, ಅವರು ಮದ್ರಾಸ್‌ನ ಆಲ್ ಇಂಡಿಯಾ ರೇಡಿಯೊದಲ್ಲಿ (All India Radio, Chennai) ತಮ್ಮ ಮೊದಲ ಸಾರ್ವಜನಿಕ ಪ್ರದರ್ಶನವನ್ನು ನೀಡಿದರು. ಮದ್ರಾಸ್ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ವಾಣಿಯವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮದ್ರಾಸ್‌ನಲ್ಲಿ (State Bank of India, Chennai) ಉದ್ಯೋಗಿಯಾಗಿದ್ದರು.

    1969 ರಲ್ಲಿ ಜೈರಾಮ್ ಅವರೊಂದಿಗಿನ ವಿವಾಹದ ನಂತರ, ಅವರು ತಮ್ಮ ಕುಟುಂಬವನ್ನು ಸ್ಥಾಪಿಸಲು ಮುಂಬೈಗೆ ತೆರಳಿದರು.  ಅವರ ಗಾಯನ ಕೌಶಲ್ಯವನ್ನು ತಿಳಿದ ಜೈರಾಮ್, ವಾಣಿಯವರನ್ನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆಯಲು ಮನವೊಲಿಸಿದರು. ಪಟಿಯಾಲಾ ಘರಾನಾದ ಉಸ್ತಾದ್ ಅಬ್ದುಲ್ ರೆಹಮಾನ್ ಖಾನ್ ಅವರ ಬಳಿ ಸಂಗೀತಾಭ್ಯಾಸಕ್ಕೆ ಸೇರಿಕೊಂಡರು. ಇಲ್ಲಿ ಪಡೆದ ಕಠಿಣ ಮತ್ತು ಉತ್ಕೃಷ್ಟ ತರಬೇತಿಯೇ ಅವರನ್ನು ಸಂಗೀತವನ್ನು ವೃತ್ತಿಯನ್ನಾಗಿ ಪರಿಗಣಿಸುವಂತೆ ಮಾಡಿತು.

    ಎಂತಹುದೇ ಕಷ್ಟಕರವಾದ ಸಂಯೋಜನೆಯಾದರೂ ಸುಲಭವಾಗಿ ಹೊಂದಿಕೊಂಡು, ನಿರಾಯಾಸವಾಗಿ ಹಾಡಬಲ್ಲರೆಂಬ ಖ್ಯಾತಿ ಪಡೆದಿದ್ದರು ವಾಣಿ ಜಯರಾಮ್.  1970 ರ ದಶಕದಿಂದ 1990 ರ ದಶಕದ ಅಂತ್ಯದವರೆಗೆ ಭಾರತದಾದ್ಯಂತ ಹಲವಾರು ಸಂಯೋಜಕರ ಅಚ್ಚುಮೆಚ್ಚಿನ ಆಯ್ಕೆಯಾಗಿದ್ದರು. ಎಂಎಸ್ ಇಳಯರಾಜ (M S Ilaiyaraaja), ಆರ್‌ಡಿ ಬರ್ಮನ್ (RD Burman), ಕೆವಿ ಮಹದೇವನ್ (KV Mahadevan), ಒಪಿ ನಯ್ಯರ್ (O.P. Nayyar), ಮದನ್ ಮೋಹನ್ (Madan Mohan), ಎ ಆರ್ ರೆಹಮಾನ್ (A R Rehman) ಸೇರಿದಂತೆ ಇತರ ಪ್ರಸಿದ್ಧ ಸಂಗೀತ ನಿರ್ದೇಶಕರೊಡನೆ ಅವರು ಕೆಲಸ ಮಾಡಿದ್ದಾರೆ.

    ಅವರು ಹಲವಾರು ಭಾರತೀಯ ಭಾಷೆಗಳಲ್ಲಿ (19 ಭಾಷೆಗಳು), ಕನ್ನಡ, ತಮಿಳು, ಹಿಂದಿ, ತೆಲುಗು, ಮಲಯಾಳಂ, ಮರಾಠಿ, ಒಡಿಯಾ, ಗುಜರಾತಿ, ಅಸ್ಸಾಮಿ, ತುಳು ಮತ್ತು ಬಂಗಾಳಿ ಭಾಷೆಗಳಲ್ಲಿ ಹಾಡಿದ್ದಾರೆ. ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ ಕುಮಾರ್, ಅನಂತ್ ನಾಗ್ ಸೇರಿದಂತೆ ಹೆಸರಾಂತ ಕಲಾವಿದರ ಚಿತ್ರಕ್ಕೆ ಹಾಡಿದ ಹೆಗ್ಗಳಿಕೆ ಇವರದ್ದು.

     

    ಅವರು ಗಳಿಸಿದ ಹಲವು ಪ್ರಶಸ್ತಿಗಳಲ್ಲಿ ಕೆಲವು –

    • ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಮೂರು ಬಾರಿ ಗೆದ್ದಿದ್ದಾರೆ.
    • ಒಡಿಶಾ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಗುಜರಾತ್ ರಾಜ್ಯಗಳಿಂದ ರಾಜ್ಯ ಸರ್ಕಾರದ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
    • 2012 ರಲ್ಲಿ, ಅವರು ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿಯೊಂದಿಗೆ ಗೌರವಿಸಲ್ಪಟ್ಟರು.
    • 2021 ರಲ್ಲಿ ವೃತ್ತಿಪರ ಗಾಯಕಿಯಾಗಿ ತಮ್ಮ ಸುವರ್ಣ ಮಹೋತ್ಸವವನ್ನು ಪೂರ್ಣಗೊಳಿಸಿದ ವಾಣಿ ಜಯರಾಮ್ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

     

    ಅವರು ಹಾಡಿದ 10,000 ಸಾವಿರ ಹಾಡುಗಳಲ್ಲಿ ಕೆಲವು ಕನ್ನಡದ ಹಾಡುಗಳನ್ನು ನೆನೆಯುವುದಾದರೆ – 

    ಎಂದೆಂದೂ ನಿನ್ನನು ಮರೆತು – ಎರಡು ಕನಸು

    ರಂಗೇನ ಹಳ್ಳಿಯಾಗೆ – ಬಿಳಿ ಹೆಂಡತಿ

    ಸುತ್ತ ಮುತ್ತ ಯಾರೂ ಇಲ್ಲ – ಕಳ್ಳ ಕುಳ್ಳ

    ಶುಭ ಮಂಗಳ ಸುಮೂಹರ್ತವೆ – ಶುಭಮಂಗಳ

    ಬೆಳ್ಳಿ ಮೋಡವೇ ಎಲ್ಲಿ ಓದುವೆ – ವಸಂತ ಲಕ್ಷ್ಮಿ

    ಕನಸಲೂ ನೀನೇ ಮನಸಲೂ ನೀನೇ – ಬಯಲು ದಾರಿ

    ಬೆಸುಗೆ – ಬೆಸುಗೆ

    ಏನೇನೋ ಆಸೆ – ಶಂಕರ ಗುರು

    ತೆರೆದಿದೆ ಮನೆ – ಹೊಸ ಬೆಳಕು

    ಮಾನಸ ಸರೋವರ – ಮಾನಸ ಸರೋವರ

    ಲಾಲಿ ಲಾಲಿ ಸುಕುಮಾರ – ಭಕ್ತ ಪ್ರಹ್ಲಾದ

    ಕಣ್ಣು ಕಣ್ಣು ಕಲೆತಾಗ – ಕಾಮನಬಿಲ್ಲು

    ಏನು ಮಾಯವೋ ಏನು ಮರ್ಮವೋ – ಭಾಗ್ಯದ ಲಕ್ಷ್ಮಿ ಬಾರಮ್ಮ

    ರಾಗಕೆ ಸ್ವರವಾಗಿ – ಹೃದಯ ಪಲ್ಲವಿ

    ಏನ್ ಹುಡ್ಗಿರೋ ಅದ್ಯಾಕಿಂಗ್ ಆಡ್ತಿರೋ – ರಣಧೀರ

     

    (ಚಿತ್ರಗಳ ಕೃಪೆ – ಅಂತರ್ಜಾಲ)

    Verbattle
    Verbattle
    Verbattle
    #chennai #cinema A R Rehman Entertainment india m M S Ilaiyaraaja mi RD Burman tamil tamil nadu tamilnad vani jayaram ಕಲೆ ಚಲನಚಿತ್ರ ಸಿನಿಮ
    Share. Facebook Twitter Pinterest LinkedIn Tumblr Email WhatsApp
    Previous ArticleBjp ಅಧಿಕಾರಕ್ಕೆ ಬರುವುದನ್ನು ತಡೆಯಲಾಗುವುದಿಲ್ಲ
    Next Article ಪಾಕ್ ಮಾಜಿ ಅಧ್ಯಕ್ಷ ಮುಷರಫ್ ಇನ್ನಿಲ್ಲ
    vartha chakra
    • Website

    Related Posts

    ಓಶೋ ರಜನೀಶ್: ವಿವಾದಗಳ ನಡುವಿನ ‘ಮಹಾನ್ ಸಮ್ಮೋಹಕ’ ಮತ್ತು ಅತಿಮಾನುಷ ಪ್ರಭೆ

    ಫೆಬ್ರವರಿ 11, 2026

    ರಷ್ಯಾ ಅಧ್ಯಕ್ಷ ಪುತಿನ್ ಸುತ್ತ ಲೈಂಗಿಕ ಬ್ಲ್ಯಾಕ್‌ಮೇಲ್ ತಂತ್ರದ ಹುತ್ತ: ಏನಿದು ಹನಿ ಟ್ರ್ಯಾಪ್?

    ಫೆಬ್ರವರಿ 10, 2026

    ಬೆಂಗಳೂರಿನಲ್ಲಿ ಸಖಿ ಆಟೋ

    ಫೆಬ್ರವರಿ 9, 2026

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಕೇಂದ್ರದ ಅನುಮತಿ ಸಿಕ್ಕರೆ ಮೇಕೆದಾಟು, ಯುಕೆಪಿ ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

    ಶಾಸಕರೇ ಬಾಯಿ ಮುಚ್ಚಿಕೊಂಡಿರಿ.

    ಐಷಾರಾಮಿ ಬಸ್ಸುಗಳಲ್ಲಿ ಇವು ಇರಲೇಬೇಕು

    ಪಿ.ಜಿ.ಗಳಿಗೆ ಬೀಳುತ್ತೇ‌ ಬೀಗ!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • LinwoodGah ರಲ್ಲಿ ರಾಜ್ಯಪಾಲರಾಗಲಿರುವ ಈಶ್ವರಪ್ಪ | Eshwarappa
    • LinwoodGah ರಲ್ಲಿ ಯಾರೇ.. ಕೂಗಾಡಲಿ…
    • LeonardReawn ರಲ್ಲಿ ಶಿಗ್ಗಾವಿ ಕಾಂಗ್ರೆಸ್ ಟಿಕೆಟ್ ಗೆ ಮಠಾಧೀಶರ ಅರ್ಜಿ..
    Latest Kannada News

    ಕೇಂದ್ರದ ಅನುಮತಿ ಸಿಕ್ಕರೆ ಮೇಕೆದಾಟು, ಯುಕೆಪಿ ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

    ಫೆಬ್ರವರಿ 13, 2026

    ಶಾಸಕರೇ ಬಾಯಿ ಮುಚ್ಚಿಕೊಂಡಿರಿ.

    ಫೆಬ್ರವರಿ 13, 2026

    ಐಷಾರಾಮಿ ಬಸ್ಸುಗಳಲ್ಲಿ ಇವು ಇರಲೇಬೇಕು

    ಫೆಬ್ರವರಿ 13, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.