ಬೆಂಗಳೂರು,ಏ.2: ರಾಜ್ಯದಲ್ಲಿನ ಎಲ್ಲಾ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲು ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕೆಂದು ಬಿಜೆಪಿ ಪಣ ತೊಟ್ಟು ಕೆಲಸ ಮಾಡುತ್ತಿದೆ. ಇಂತಹ ಮಹತ್ವಾಕಾಂಕ್ಷೆಗೆ ರಾಜ್ಯ ನಾಯಕರ ಒಳ ಒಪ್ಪಂದದ ರಾಜಕಾರಣ ಅಡ್ಡಿಯಾಗಬಾರದು ಎಂದು ಪಕ್ಷದ ಹಿರಿಯ ನಾಯಕ ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ.
ಪಕ್ಷದ ಪ್ರಚಾರ ತಂತ್ರ, ಮೈತ್ರಿ ಪಕ್ಷ ಜೆಡಿ ಎಸ್ ಜೊತೆಗಿನ ಸಮನ್ವಯ ಹಾಗೂ ಅಭ್ಯರ್ಥಿಗಳ ಗೆಲುವಿನ ಕಾರ್ಯತಂತ್ರ ರೂಪಿಸಲು ಆಗಮಿಸಿರುವ ಅವರು ಬಿಜೆಪಿ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿದರು.
ಪ್ರಮುಖವಾಗಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಅಪಸ್ವರ ಎತ್ತಿರುವ ಬೆಳಗಾವಿ, ಬೀದರ್ , ಚಿತ್ರದುರ್ಗ ,ತುಮಕೂರು ಮತ್ತು ಚಿಕ್ಕ ಬಳ್ಳಾಪುರ ಕ್ಷೇತ್ರಗಳ ಕೋರ್ ಕಮಿಟಿ ಸದಸ್ಯರು ಮತ್ತು ರಾಜ್ಯದ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿದರು.
ಈ ಸಮಯದಲ್ಲಿ ಕಳೆದ ವಿಧಾನಸಭೆ ಚುನಾವಣೆಯ ಫಲಿತಾಂಶವನ್ನು ನೆನಪಿಸಿದ ಅವರು ಬಹುತೇಕ ಕಡೆಗಳಲ್ಲಿ ನಾಯಕರು ಮಾಡಿಕೊಂಡ ಒಳ ಒಪ್ಪಂದದ ಪರಿಣಾಮವಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದಿಂದ ದೂರ ಉಳಿಯುವಂತಾಯಿತು ಕಳೆದ ಚುನಾವಣೆಯಲ್ಲಿ ಎಲ್ಲೆಲ್ಲಿ ಒಳ ಒಪ್ಪಂದ ನಡೆದಿದೆ ಎಂಬ ಬಗ್ಗೆ ಹೈಕಮಾಂಡ್ ಬಳಿ ಸಂಪೂರ್ಣ ಮಾಹಿತಿ ಇದೆ ಅದನ್ನು ಈಗ ಚರ್ಚಿಸಲು ಹೋಗುವುದಿಲ್ಲ ನಮ್ಮ ಮುಂದೆ ಇರುವುದು ದೊಡ್ಡ ಸಮರ. ಅದನ್ನು ಎದುರಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಸಲಹೆ ಮಾಡಿರುವುದಾಗಿ ತಿಳಿದು ಬಂದಿದೆ.
ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ನಡೆದ ಯಾವುದೇ ವಿದ್ಯಮಾನ ಲೋಕಸಭೆ ಚುನಾವಣೆಯಲ್ಲಿ ಪುನರಾವರ್ತನೆಯಾಗಬಾರದು, ಒಳ ಒಪ್ಪಂದದ ರಾಜಕಾರಣವನ್ನು ಹೈಕಮಾಂಡ್ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಅಂತಹ ನಾಯಕರ ವಿರುದ್ಧ ಪಕ್ಷ ಕಠಿಣ ಕ್ರಮ ಜರುಗಿಸಲಿದೆ ಅದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡದೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿರುವುದಾಗಿ ಗೊತ್ತಾಗಿದೆ.
ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಮಯದಲ್ಲಿ ಪಕ್ಷ ಅರ್ಹತೆ ಮತ್ತು ಗೆಲುವಿನ ಮಾನದಂಡ ಆಧರಿಸಿ ಟಿಕೆಟ್ ನೀಡಿದೆ. ಹೈಕಮಾಂಡ್ ಮಾಡಿರುವ ಈ ನಿರ್ಧಾರವನ್ನು ಎಲ್ಲರೂ ಗೌರವಿಸಬೇಕು ವಲಸೆ ಬಂದವರು ಪಕ್ಷದಿಂದ ಹೊರಗಿದ್ದವರು ಎಂಬ ಕಾರಣಗಳನ್ನು ಮುಂದೊಡ್ಡಿ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಬಹುದಾಗಿ ತಿಳಿದು ಬಂದಿದೆ
ನಂತರ ಪಕ್ಷದ ರಾಜ್ಯ ಕೋರ್ ಕಮಿಟಿ ಸದಸ್ಯರೊಂದಿಗೆ ಮಾತುಕತೆ ನಡೆಸಿದ ಅವರು,ಪಕ್ಷದ ಅಭ್ಯರ್ಥಿಗಳು ಎಲ್ಲೆಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಅದಕ್ಕೆ ಕಾರಣವಾದ ಅಂಶಗಳೇನು ಎಂಬುದನ್ನು ವಿವರಿಸಿದರು. ಇವುಗಳ ಬಗ್ಗೆ ವಿಶೇಷ ಗಮನ ಹರಿಸಲು ಸಲಹೆ ಮಾಡಿದರು.
ಈಶ್ವರಪ್ಪ ಜೊತೆ ಸಂಧಾನ:
ಇದರ ನಡುವೆಯೇ ಹಿರಿಯ ನಾಯಕ ಈಶ್ವರಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಕೆಲ ಕಾಲ ಮಾತುಕತೆ ನಡೆಸಿದರು. ಅವರ ಅಹವಾಲು ಆಲಿಸಿದ ಅವರು ಈ ಕುರಿತು ಹೆಚ್ಚಿನ ಮಾತುಕತೆಗಾಗಿ ನಾಳೆ ದೆಹಲಿಗೆ ಬರುವಂತೆ ಸೂಚಿಸಿದರು.
ಇದಕ್ಕೆ ಒಪ್ಪಿದ ಈಶ್ವರಪ್ಪ ನಾಳೆ ದೆಹಲಿಗೆ ಬರುತ್ತೇನೆ. ಆದರೆ ಪಕ್ಷವನ್ನು ಕುಟುಂಬದ ಮುಷ್ಟಿಯಿಂದ ಪಾರು ಮಾಡಎನ್ನಲಾಗಿದೆ.ರಾಟ ಮಾಡುತ್ತಿದ್ದೇನೆ. ಹೀಗಾಗಿ ತಾವು ಸ್ಪರ್ಧೆ ಮಾಡುವ ನಿರ್ಧಾರ ಅಚಲ ಎಂದರು.ಅದಕ್ಕೆ ಅವರು ಎಲ್ಲವನ್ನೂ ಸುದೀರ್ಘವಾಗಿ ಮಾತನಾಡೋಣಾ ನಾಳೆ ಬನ್ನಿ ಎಂದರು ಎನ್ನಲಾಗಿದೆ.
3 ಪ್ರತಿಕ್ರಿಯೆಗಳು
order generic clomiphene without a prescription where can i buy clomiphene price order cheap clomiphene cost of cheap clomiphene online clomid pills at dischem price can i order cheap clomid pills where buy cheap clomid tablets
More content pieces like this would urge the интернет better.
cost inderal 20mg – buy propranolol generic order methotrexate 10mg pill