Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಕೊಲೆಗಾರರ ಬಂಧನ
    ಸುದ್ದಿ

    ಕೊಲೆಗಾರರ ಬಂಧನ

    vartha chakraBy vartha chakraಜೂನ್ 7, 2022Updated:ಜೂನ್ 7, 2022ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,7-ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಎಲೆಕ್ಟ್ರಿಕಲ್ ಉಪಕರಣಗಳ ಅಂಗಡಿಯ ವೃದ್ಧ ಮಾಲೀಕನನ್ನು ಕೊಲೆಗೈದು ಭಾರಿ ಮೊತ್ತದ ಹಣ ಹಾಗೂ ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ ಪ್ರಮುಖ ಆರೋಪಿ ಜೊತೆಗೆ ಇನ್ನು ನಾಲ್ವರನ್ನು ಬಂಧಿಸಿ‌ರುವ ಚಾಮರಾಜಪೇಟೆ ಪೊಲೀಸರು 4ಕೋಟಿ 93 ಲಕ್ಷ 80 ಸಾವಿರ ಮೌಲ್ಯದ ನಗದು ಚಿನ್ನ ಬೆಳ್ಳಿ ಆಭರಣಗಳನ್ನು ವಶಪಕೊಂಡಿದ್ದಾರೆ.
    ಪ್ರಮುಖ ಆರೋಪಿ ಬಿಜಾರಾಮ್ ಜೊತೆಗೆ ಪೂರನ್ ರಾಮ್(26)ಮಹೇಂದ್ರ ದೇವಸಿ(35)ಹಾಗೂ ಓಂಪ್ರಕಾಶ್ ದೇವಸಿ (26)ಬಂಧಿಸಿ 53 ಲಕ್ಷ 48 ಲಕ್ಷ ನಗದು ಸೇರಿ 4ಕೋಟಿ 93 ಲಕ್ಷ 80 ಸಾವಿರ ಮೌಲ್ಯದ 8ಕೆಜಿ 752 ಗ್ರಾಂ ಚಿನ್ನಾಭರಣಗಳು 3ಕೆಜಿ ,870ಗ್ರಾಂ ಬೆಳ್ಳಿ ಗಟ್ಟಿಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
    ಆರೋಪಿ ಬಿಜುರಾಮ್ ಕಳೆದ 6 ತಿಂಗಳಿಂದ ಜುಗ್‍ರಾಜ್ ಜೈನ್ ಅವರ ಚಿಕ್ಕಪೇಟೆಯಲ್ಲಿರುವ ದೀಪಂ ಎಲೆಕ್ಟ್ರಿಕಲ್ಸ್ ಅಂಗಡಿ ಮತ್ತು ಚಾಮರಾಜಪೇಟೆಯ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದು
    ಕಳೆದ ಮೇ25 ರಂದು ಜುಗ್‍ರಾಜ್ ಜೈನ್ ರವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಸಹಚರರು ಜೊತೆ ಸೇರಿ ಜುಗ್‍ರಾಜ್ ಜೈನ್ ರವರು ಒಬ್ಬರೇ ಇರುವುದನ್ನು ತಿಳಿದು 2 ದಿನಗಳಿಂದ ಸಂಚು ರೂಪಿಸಿ ಮೇ 24 ರಂದು ರಾತ್ರಿ 9-30ರ ವೇಳೆ ಅವರ ಕಣ್ಣಿಗೆ ಖಾರದ ಪುಡಿ ಎರಚಿ, ಬಾಯಿಗೆ ಬಟ್ಟೆ ತುರುಕಿ, ಎರಡು ಕೈಗಳನ್ನು ಬೆನ್ನಿನ ಹಿಂದಕ್ಕೆ ಪ್ಲಾಸ್ಟಿಕ್ ದಾರದಿಂದ ಕಟ್ಟಿ, ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿದ್ದ.
    ಮನೆಯಲ್ಲಿದ್ದ ಸುಮಾರು 15 ಕೆಜಿ ತೂಕದಷ್ಟು ಚಿನ್ನ ಮತ್ತು ಬೆಳ್ಳಿ ಆಭರಣಗಳು, ನಗದು ಹಣ 60 ಲಕ್ಷ ರೂಗಳನ್ನು ಆರೋಪಿ ಬಿಜಾರಾಮ್ ಮತ್ತು ಆತನ ಸಹಚರ ಓಂ ರಾಮ್ ದೇವಸಿ ರವರು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
    ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ಕಾರ್ಯಾಚರಣೆ ಕೈಗೊಂಡ ಬೆನ್ನಲ್ಲೇ ಮೇ 29ರಂದು ಗುಜರಾತ್ ನ ಅಮೀರ್ ಗಢ ಠಾಣೆಯ ಪೊಲೀಸರ ಸಹಕಾರದಿಂದ ಆರೋಪಿ ಬಿಜಾರಾಮ್ ನನ್ನು ಬಂಧಿಸಲಾಗಿತ್ತು ಎಂದರು.
    ಬಳಿಕ ಆತ ವಿಚಾರಣೆಯಲ್ಲಿ ನೀಡಿದ ಮಾಹಿತಿ ಆಧರಿಸಿ ಮೂರನೇ ಪೂರನ್ ರಾಮ್ ದೇವಸಿನನ್ನು ಗೋವಾದ ಆತನ ನಿವಾಸದಲ್ಲಿ ವಶಕ್ಕೆ ಪಡೆದು ಈತನಿಂದ ಕಳವು ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
    ಬಳಿಕ ಇವರಿಬ್ಬರೂ ವಿಚಾರಣೆ ನಡೆಸಿ ಮಾಹಿತಿಯನ್ನು ಪಡೆದು ಮಹೇಂದ್ರ ದೇವಸಿ ಹಾಗೂ ಓಂ ಪ್ರಕಾಶ್ ದೇವಸಿ ರವರನ್ನು, ರಾಜಸ್ಥಾನದ ಕಿವಲಿ ಗ್ರಾಮದ ಮನೆಯಲ್ಲಿ ಬಂಧಿಸಿ ಉಳಿದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
    ಕಾರ್ಯಾಚರಣೆಯನ್ನು ಚಾಮರಾಜಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ಎರ್ರಿಸ್ವಾಮಿ ಅವರನ್ನೂಳಗೊಂಡ ಡಿಸಿಪಿ ಡಾ.ಸಂಜೀವ್ ಪಾಟೀಲ್ ನೇತೃತ್ವದ ವಿಶೇಷ ತಂಡ ನಡೆಸಿದೆ ಎಂದು ಅವರು ತಿಳಿಸಿದರು.

    crime ಕಳ್ಳತನ ಕೊಲೆ
    Share. Facebook Twitter Pinterest LinkedIn Tumblr Email WhatsApp
    Previous Articleಪಿಯು ಪಠ್ಯಪರಿಷ್ಕರಣೆ ಸಮಿತಿಯಿಂದ ರೋಹಿತ್ ಚಕ್ರತೀರ್ಥ‌ಗೆ ಗೇಟ್‌ಪಾಸ್
    Next Article ಸಾರ್ವಜನಿಕರ ಅವಗಾಹನೆಗೆ
    vartha chakra
    • Website

    Related Posts

    ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಎಂಟ್ರಿ.

    ಜುಲೈ 5, 2025

    ಹಿಂದುತ್ವ ಪರ ಮುಖಂಡನ ಮೊಬೈಲ್ ನಲ್ಲಿ ಬೆಚ್ಚಿ ಬೀಳಿಸಿದ ವಿಡಿಯೋ.

    ಜುಲೈ 5, 2025

    ಬೆಂಗಳೂರಿನಲ್ಲಿ ಹೀಗೂ ಇದೆ ಬೈಕ್ ಟ್ಯಾಕ್ಸಿ ಸೇವೆ.

    ಜುಲೈ 5, 2025

    Comments are closed.

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಎಂಟ್ರಿ.

    ಹಿಂದುತ್ವ ಪರ ಮುಖಂಡನ ಮೊಬೈಲ್ ನಲ್ಲಿ ಬೆಚ್ಚಿ ಬೀಳಿಸಿದ ವಿಡಿಯೋ.

    ಬೆಂಗಳೂರಿನಲ್ಲಿ ಹೀಗೂ ಇದೆ ಬೈಕ್ ಟ್ಯಾಕ್ಸಿ ಸೇವೆ.

    ಶಂಕರ್ ಬಿದರಿ ಮಕ್ಕಳು ಏನು ಮಾಡುತ್ತಿದ್ದಾರೆ ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Davidzooro ರಲ್ಲಿ ಭ್ರೂಣ ಹತ್ಯೆ ಪ್ರಕರಣ: ಸಿಐಡಿ ತನಿಖೆಗೆ | CID
    • vivodzapojkrasnodarvucky ರಲ್ಲಿ ಡಿ.ಕೆ‌. ಸುರೇಶ್ ಕೆಎಂಎಫ್ ಅಧ್ಯಕ್ಷರಾಗುವುದು ಖಚಿತ.
    • lecheniekrasnodarvucky ರಲ್ಲಿ ಕಾಡು ಕಡಿದವರನ್ನು ಹುಡುಕಿ | Uttara Kannada
    Latest Kannada News

    ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಎಂಟ್ರಿ.

    ಜುಲೈ 5, 2025

    ಹಿಂದುತ್ವ ಪರ ಮುಖಂಡನ ಮೊಬೈಲ್ ನಲ್ಲಿ ಬೆಚ್ಚಿ ಬೀಳಿಸಿದ ವಿಡಿಯೋ.

    ಜುಲೈ 5, 2025

    ಬೆಂಗಳೂರಿನಲ್ಲಿ ಹೀಗೂ ಇದೆ ಬೈಕ್ ಟ್ಯಾಕ್ಸಿ ಸೇವೆ.

    ಜುಲೈ 5, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ರಶ್ಮಿಕಾ ಬರೀ ಬಿಲ್ಡಪ್ಪು ಗುರು! #rashmikamandanna #viralvideo #kannada #bulidup #latestnews #karnataka
    Subscribe