ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾ ಜೋಡಿ ಹೊಸ ರಾಜಕೀಯ ಪ್ರಯೋಗಗಳ ಮೂಲಕ ಕಾಂಗ್ರೆಸ್ ಪಕ್ಷವನ್ನು ಸೋಲಿನ ಕೂಪಕ್ಕೆ ದೂಡಿದ್ದರೂ ಕೂಡ ಕಾಂಗ್ರೆಸ್ ತನ್ನ ಪ್ರಭಾವ ಕಳೆದುಕೊಂಡಿಲ್ಲ ಹಾಗೆಯೇ ಪುಟಿದೇಳುವ ಪ್ರಯತ್ನವನ್ನು ಕೂಡ ನಿಲ್ಲಿಸಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಇನ್ನು ಕಾಂಗ್ರೆಸ್ಸಿಗೆ ತನ್ನದೇ ಆದ ಮತ ಬ್ಯಾಂಕ್ ಇದೆ ಅದರಲ್ಲೂ ಕಾಂಗ್ರೆಸ್ಸಿನ ಅತಿ ದೊಡ್ಡ ನಾಯಕಿ ಎಂದು ಪರಿಗಣಿಸಲ್ಪಟ್ಟಿರುವ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಗ್ರಾಮೀಣ ಪ್ರದೇಶದ ಜನಮಾನಸದಲ್ಲಿ ಅಚ್ಚಳಿಯದೆ ನೆಲೆಸಿದ್ದಾರೆ.
ಸ್ಥಳೀಯ ಮಟ್ಟದಲ್ಲಿ ಪಕ್ಷಕ್ಕೆ ಒಂದಷ್ಟು ನಾಯಕರು ಇದ್ದರೂ ಕೂಡ ಇಡೀ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ದೊಡ್ಡ ನಾಯಕ ಮತಗಳನ್ನು ಕೊಡಿಸಬಲ್ಲ ನಾಯಕತ್ವ ದೊಡ್ಡ ಕೊರತೆ. ಈಗ ಕಾಂಗ್ರೆಸ್ ಗೆ ರಾಹುಲ್ ಗಾಂಧಿ ಮಾತ್ರ ರಾಷ್ಟ್ರೀಯ ಮಟ್ಟದಲ್ಲಿ ಪಕ್ಷದ ನಾಯಕ ಆದರೆ ಇವರು ಪ್ರತಿಪಾದಿಸುವ ಪ್ರಬಲ ತತ್ವ ಸಿದ್ಧಾಂತ ಮತ್ತು ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳದ ಗೆಲುವಿನ ಪರಿಣಾಮ ದೊಡ್ಡ ಪ್ರಮಾಣದಲ್ಲಿ ಮತಗಳನ್ನು ತಂದು ಕೊಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ರಾಹುಲ್ ಗಾಂಧಿಯವರ ಇತಿಮಿತಿಗಳು ಪ್ರಮುಖ ಕಾರಣ ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕತ್ವ ರಾಷ್ಟ್ರೀಯ ಮಟ್ಟದಲ್ಲಿ ವರ್ಚಸ್ಸು ಇರುವ ಮತ್ತು ಮತಗಳನ್ನು ತಂದು ಕೊಡುವ ನಾಯಕತ್ವಕ್ಕಾಗಿ ಆಶೆಗಣ್ಣುಗಳಿಂದ ನೋಡುತ್ತಾ ಕುಳಿತಿದ್ದಾರೆ ಇವರ ಕಣ್ಣಿಗೆ ಈಗ ಕಾಣಸಿಗುತ್ತಿರುವುದು ವಯನಾಡು ಕ್ಷೇತ್ರದ ಸಂಸದೆ ಪ್ರಿಯಾಂಕ ಗಾಂಧಿ.
ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ರಾಜಕಾರಣದ ಮುಖ್ಯ ವಾಹಿನಿಯಲ್ಲಿ ಕಾಣಿಸಿಕೊಂಡರೂ ಕೂಡ ಹಲವಾರು ಕಾರಣಗಳಿಂದ ಅವರು ಮುಂಚೂಣಿಗೆ ಬರಲು ಸಾಧ್ಯವಾಗಿರಲಿಲ್ಲ. ದೊರಕಿದ ಅಲ್ಪ ಅವಕಾಶದಲ್ಲೇ ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಮುತ್ತು ಉತ್ತರಾಖಂಡದಲ್ಲಿ ತಮ್ಮ ಪ್ರಭಾವ ತೋರಿಸುವಲ್ಲಿ ಯಶಸ್ವಿಯಾಗಿದ್ದರು.
ಅವರ ತಾಯಿ ಸೋನಿಯಾ ಗಾಂಧಿ ಚುನಾವಣಾ ರಾಜಕಾರಣದಿಂದ ದೂರ ಉಳಿದ ನಂತರ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಪ್ರಿಯಾಂಕಾ ಗಾಂಧಿಗಳು ಮೊದಲ ಬಾರಿಗೆ ಲೋಕಸಭೆಯ ಅಂಗಳಕ್ಕೆ ಕಾಲಿಟ್ಟಿದ್ದಾರೆ.
ಸಂಸದರಾಗಿ ಕೇವಲ 12 ತಿಂಗಳ ಮಾತ್ರ ಪೂರ್ಣಗೊಳಿಸಿರುವ ಪ್ರಿಯಾಂಕ ಗಾಂಧಿ ಎರಡು ಅಧಿವೇಶನಗಳಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ಈ ರೀತಿ ಎಲ್ಲ ಹಂತದಲ್ಲಿ ಗಮನ ಸೆಳೆಯುತ್ತಿರುವ ಪ್ರಿಯಾಂಕಾ ಗಾಂಧಿ ಅವರನ್ನು ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಪಕ್ಷ ಸಂಘಟನೆಗೆ ಅವರನ್ನು ಹೆಚ್ಚಾಗಿ ಬಳಸಿಕೊಳ್ಳಬೇಕು ಎಂಬ ಆಗ್ರ ಕಾಂಗ್ರೆಸ್ ವಲಯದಿಂದಲೇ ಕೇಳಿ ಬರುತ್ತಿದೆ.
ನೋಡಲು ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೋಲಿಕೆ ಪ್ರಿಯಾಂಕಾ ಅವರ ದೊಡ್ಡ ಆಸ್ತಿ. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಅವರ ಗುಣ ಎಲ್ಲರ ಮೆಚ್ಚುಗೆ ಪಾತ್ರವಾಗಿದೆ ಹೀಗಾಗಿ ರಾಹುಲ್ ಗಾಂಧಿ ಪಕ್ಷದ ತತ್ವ ಸಿದ್ಧಾಂತದ ಮುಖವಾಣಿಯಾಗಿ ಮುಂದುವರೆದರೆ ಪ್ರಿಯಾಂಕಾ ಗಾಂಧಿ ಸಂಘಟನಾತ್ಮಕವಾಗಿ ನೇತೃತ್ವ ವಹಿಸಲಿ ಎನ್ನುವುದು ಅನೇಕ ಮಂದಿ ಕಾಂಗ್ರೆಸ್ ನಾಯಕರ ಆಗ್ರಹವಾಗಿದೆ.
Previous Articleಡ್ರಗ್ಸ್ ಜಾಲದಲ್ಲಿ ಮಂತ್ರಿಗಳ ಆಪ್ತರು!
Next Article ಡ್ರಗ್ಸ್ ದಂಧೆ – ಪೊಲೀಸರೇ ಎಚ್ಚರ!


3 Comments
canadian medications: SteadyMeds pharmacy – SteadyMeds
medicine online order: FormuLine Pharmacy – top online pharmacy
AccessBridge: AccessBridge – AccessBridge Pharmacy