Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ದಿನ ದಿನಕ್ಕೆ ಬಿಗಡಾಯಿಸಿತ್ತಿರುವ ಪರಿಷತ್ ನಾಮಕರಣ | Vidhan Parishad
    ರಾಜಕೀಯ

    ದಿನ ದಿನಕ್ಕೆ ಬಿಗಡಾಯಿಸಿತ್ತಿರುವ ಪರಿಷತ್ ನಾಮಕರಣ | Vidhan Parishad

    vartha chakraBy vartha chakraಆಗಷ್ಟ್ 10, 2023ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು – ಕಲೆ, ಸಾಹಿತ್ಯ, ಶಿಕ್ಷಣ, ಸಮಾಜ ಸೇವೆ ಸೇರಿದಂತೆ ಸಮಾಜದ ವಿವಿಧ ವಲಯದಲ್ಲಿ ಸೇವೆ ಸಲ್ಲಿಸಿದ ಪ್ರಮುಖರನ್ನು ವಿಧಾನ ಪರಿಷತ್‌ಗೆ ನೇಮಕ ಮಾಡುವ ವಿಚಾರ ಇದೀಗ ಕಾಂಗ್ರೆಸ್ ನಲ್ಲಿ ಹೊಸ ಬಿಕ್ಕಟ್ಟು ಸೃಷ್ಟಿಯಾಗುವಂತೆ ಮಾಡಿದೆ.
    ಇಲ್ಲಿಯವರೆಗೆ ಪರಿಷತ್ ಸದಸ್ಯರಾಗಿದ್ದ ಪಿ.ಆರ್. ರಮೇಶ್, ಸಿ.ಎಂ. ಲಿಂಗಪ್ಪ ಮತ್ತು ಮೋಹನ್ ಕೊಂಡಜ್ಜಿ ಅವರ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ನೇಮಕ ಮಾಡುವ ಅಧಿಕಾರವನ್ನು ಸಂಪುಟ ಮುಖ್ಯಮಂತ್ರಿಗಳಿಗೆ ನೀಡಿತ್ತು.
    ಅವರು, ಪಕ್ಷದ ನಾಯಕರು ಮತ್ತು ಹೈಕಮಾಂಡ್ ಜೊತೆ ಚರ್ಚಿಸಿ ಮಾಜಿ ಮಂತ್ರಿ ಎಂ.ಆರ್‌. ಸೀತಾರಾಮ್, ಮನ್ಸೂರ್ ಅಲಿ ಖಾನ್ ಮತ್ತು ನಿವೃತ್ತ ಅಧಿಕಾರಿ ಎಚ್‌.ಪಿ. ಸುಧಾಮ್ ದಾಸ್ ಅವರನ್ನು ನಾಮನಿರ್ದೇಶನ ಮಾಡಲು ಮುಂದಾಗಿದ್ದರು.

    ಹಿಂದುಳಿದ ವರ್ಗಗಳ ಕೋಟಾದಿಂದ ಎಂ.ಆರ್‌. ಸೀತಾರಾಮ್‌, ಅಲ್ಪಸಂಖ್ಯಾತ ಕೋಟಾದಿಂದ ರಾಜ್ಯಸಭೆಯ ಮಾಜಿ ಸಭಾಪತಿ ರೆಹಮಾನ್ ಖಾನ್‌ ಮಗ ಮನ್ಸೂರ್‌ ಅಲಿ ಖಾನ್‌, ಪರಿಶಿಷ್ಟ ಜಾತಿ ಎಡಗೈ ಬಣದಿಂದ ಸುಧಾಮ್ ದಾಸ್ ಹೆಸರನ್ನು ಪರಿಗಣಿಸುವ ಮೂಲಕ ಎಲ್ಲಾ ಜಾತಿ ಮತ್ತು ವರ್ಗಕ್ಕೆ ಪ್ರಾತಿನಿಧ್ಯ ಎಂದು ಅಭಿಪ್ರಾಯ ಮಂಡಿಸಲಾಗಿತ್ತು.
    ಆದರೆ, ಸುಧಾಮ್ ದಾಸ್ ಅವರ ನೇಮಕ ಪ್ರಸ್ತಾವಕ್ಕೆ ಕಾಂಗ್ರೆಸ್‌ನ ಪರಿಶಿಷ್ಟ ಜಾತಿಯ ಅದರಲ್ಲೂಬಎಡಗೈ ಬಣದ ಪ್ರಮುಖ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
    ಸುಧಾಮ್ ದಾಸ್ ಅವರು ಐಆರ್ ಎಸ್ ಹುದ್ದೆಯಿಂದ ನಿವೃತ್ತರಾದ ತಕ್ಷಣವೇ ಅವರಿಗೆ ಮಾಹಿತಿ ಹಕ್ಕು ಆಯುಕ್ತರಾಗಿ ನೇಮಿಸಲಾಯಿತು. ಈ ಹುದ್ದೆಯಿಂದ ನಿವೃತ್ತರಾದ ಕೂಡಲೆ ಕಾಂಗ್ರೆಸ್ ಪ್ರಚಾರ ಸಮಿತಿ ಸಹ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ಈಗ ಪರಿಷತ್ ಗೆ ನಾಮನಿರ್ದೇಶನ ಮಾಡಲು ಮುಂದಾಗಿರುವ ಕ್ರಮ ಸರಿಯಲ್ಲ ಇವರು ತಮ್ಮ ಅಧಿಕಾರಾವಧಿಯಲ್ಲಿ ಪಕ್ಷ ಮತ್ತು ಸಮುದಾಯದ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ. ಹೀಗಾಗಿ ಇವರ ಬದಲಿಗೆ ಸಮುದಾಯದ ಯಾವುದೇ ಕಾಂಗ್ರೆಸ್ ನಾಯಕರಿಗೆ ಈ ಹುದ್ದೆ ನೀಡುವಂತೆ ಆಗ್ರಹಿಸಿದ್ದರು.

    ಇದರ ಬೆನ್ನಲ್ಲೆ, ಮನ್ಸೂರ್ ಅಲಿ ಖಾನ್ ನೇಮಕಕ್ಕೂ ವಿರೋಧ ವ್ಯಕ್ತವಾಯಿತು. ಮುಸ್ಲಿಂ ಸಮುದಾಯದ ನಾಯಕರು ಈ‌ ಆಯ್ಕೆಯನ್ನು ಬಲವಾಗಿ ವಿರೋಧಿಸಿದರು. ಮನ್ಸೂರ್ ಅವರ ತಂದೆ ರೆಹಮಾನ್ ಖಾನ್ ಅವರಿಗೆ ಪಕ್ಷ ಸಾಕಷ್ಟು ಅವಕಾಶ ನೀಡಿದೆ.ಸುದೀರ್ಘವಾದ ಅವಧಿಗೆ ವಿಧಾನ ಪರಿಷತ್, ಮತ್ತು ರಾಜ್ಯಸಭೆಯ ಸದಸ್ಯರಾಗಿದ್ದಾರೆ. ಕೇಂದ್ರ ಮಂತ್ರಿ, ರಾಜ್ಯಸಭೆಯ ಉಪ ಸಭಾಪತಿ ಹುದ್ದೆ ಕೂಡ ನೀಡಲಾಗಿದೆ. ಒಂದೇ ಕುಟುಂಬಕ್ಕೆ ಎಷ್ಟು ಬಾರಿ ಪ್ರಾತಿನಿಧ್ಯ ನೀಡಬೇಕು ಎಂದು ಪ್ರಶ್ನಿಸಿದ್ದಾರೆ. ಈ ಎಲ್ಲಾ ವಿವಾದದ ನಡುವೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ಅವರು ಮನ್ಸೂರ್ ಅವರ ಬದಲಿಗೆ ಬೇರೆ ಯಾರನ್ನಾದರೂ ನೇಮಕ ಮಾಡುವಂತೆ ಸಲಹೆ ಮಾಡಿದರು ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನ್ಸೂರ್ ಬದಲಿಗೆ ಮಾಜಿ ಮಂತ್ರಿ ಹಾಗೂ ನಟಿ ಉಮಾಶ್ರೀ ಅವರನ್ನು ನೇಮಕ ಮಾಡಲು ನಿರ್ಧರಿಸಿದರು.
    ಈ ಮಧ್ಯೆ, ಮನ್ಸೂರ್‌ ಅಲಿ ಖಾನ್‌ ಬದಲು ನಟಿ ಉಮಾಶ್ರೀ ಅವರನ್ನು ನಾಮನಿರ್ದೇಶನ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು ಹೊಂದಿರುವುದಕ್ಕೆ ಕಾಂಗ್ರೆಸ್ಸಿನ ಮುಸ್ಲಿಂ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಇಡೀ ಸಮುದಾಯ ಕಾಂಗ್ರೆಸ್‌ ಬೆನ್ನಿಗೆ ನಿಂತಿದೆ. ಹೀಗಾಗಿ, ಪರಿಷತ್‌ಗೆ ಮೂವರ ನಾಮ ನಿರ್ದೇಶನದ ಸಂದರ್ಭದಲ್ಲಿ ಒಂದು ಸ್ಥಾನವನ್ನು ಮುಸ್ಲಿಂ ಸಮುದಾಯವರಿಗೆ ನೀಡಬೇಕು ಎಂದು ಆ ಸಮುದಾಯ ನಾಯಕರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಪರಿಷತ್ ನಾಮಕರಣ ವಿಷಯ ಕಾಂಗ್ರೆಸ್ ನಲ್ಲಿ ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆಯುವ ಮೂಲಕ ಬಿಕ್ಕಟ್ಟಾಗಿ ಪರಿಣಮಿಸಿದೆ

    Karnataka Karnataka legislature MLC Vidhan Parishad ಕಲೆ ಕಾಂಗ್ರೆಸ್ ಚುನಾವಣೆ ಶಿಕ್ಷಣ ಸಾಹಿತ್ಯ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous ArticleStunt ಮಾಡಲು ಹೋಗಿ ತಗಲಾಕ್ಕೊಂಡ
    Next Article 20 ಸಾವಿರ ಕೊಟ್ಟು ಭಾರತಕ್ಕೆ ಬಂದರು | NIA
    vartha chakra
    • Website

    Related Posts

    ಹೆಬ್ಬಾಳ ಫ್ಲೈ ಓವರ್ ನಲ್ಲಿ ವಾಹನ ಸಂಚಾರ ಇರುವುದಿಲ್ಲ

    ಮೇ 17, 2025

    ಚಿನ್ನಾಭರಣ ಕದ್ದು ಗಟ್ಟಿ ಮಾಡುತ್ತಿದ್ದ ಕಳ್ಳರು !

    ಮೇ 16, 2025

    ಮಂತ್ರಿಗಳು ರಾಜಿನಾಮೆ ಕೊಡಬೇಕಂತೆ.

    ಮೇ 15, 2025

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಹೆಬ್ಬಾಳ ಫ್ಲೈ ಓವರ್ ನಲ್ಲಿ ವಾಹನ ಸಂಚಾರ ಇರುವುದಿಲ್ಲ

    ಬಾಂಬ್ ತಯಾರಿ ಮಾಡುತ್ತಿದ್ದರೋ ಸಿಕ್ಕಿಬಿದ್ದರು

    ಚಿನ್ನಾಭರಣ ಕದ್ದು ಗಟ್ಟಿ ಮಾಡುತ್ತಿದ್ದ ಕಳ್ಳರು !

    ಬೆತ್ತಲೆ ಕಳ್ಳನಿಗಾಗಿ ಪೊಲೀಸ್ ಶೋಧ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • ads-account-for-sale.top_AgomE ರಲ್ಲಿ ಮಳೆ ಬಂದಾಗ ಹೀಗೆ‌ ಮಾಡಿ – ಶಿವಕುಮಾರ್ ಸೂಚನೆ | DK Shivakumar
    • buy-ad-account.click_AgomE ರಲ್ಲಿ ಕೃಷಿ ಅಧಿಕಾರಿಗಳಿಗೆ ಚಲುವರಾಯಸ್ವಾಮಿ ಎಚ್ಚರಿಕೆ.
    • ThomasQuoro ರಲ್ಲಿ Modi ಯನ್ನು ಟೀಕಿಸಿದ ಈ George Soros ಯಾರು?
    Latest Kannada News

    ಹೆಬ್ಬಾಳ ಫ್ಲೈ ಓವರ್ ನಲ್ಲಿ ವಾಹನ ಸಂಚಾರ ಇರುವುದಿಲ್ಲ

    ಮೇ 17, 2025

    ಬಾಂಬ್ ತಯಾರಿ ಮಾಡುತ್ತಿದ್ದರೋ ಸಿಕ್ಕಿಬಿದ್ದರು

    ಮೇ 17, 2025

    ಚಿನ್ನಾಭರಣ ಕದ್ದು ಗಟ್ಟಿ ಮಾಡುತ್ತಿದ್ದ ಕಳ್ಳರು !

    ಮೇ 16, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ₹500 ಮದ್ಯ ಇಲ್ಲಿ ₹100ಕ್ಕೆ ಸಿಗುತ್ತೆ ಅತಿ ಕಡಿಮೆ ಬೆಲೆಯ ಮದ್ಯ ಎಲ್ಲಿ ಸಿಗುತ್ತೆ ಗೊತ್ತಾ ? #beer #viralvideo
    Subscribe