Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಹುಷಾರ್..! ಹುಲಿ ಬಂತು ಹುಲಿ…!
    ಸುದ್ದಿ

    ಹುಷಾರ್..! ಹುಲಿ ಬಂತು ಹುಲಿ…!

    vartha chakraBy vartha chakraಆಗಷ್ಟ್ 1, 2022Updated:ಆಗಷ್ಟ್ 1, 2022ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಮೈಸೂರು,ಆ.1-ಹಸು ಮೇಯಿಸಲು ತೆರಳಿದ್ದ ವ್ಯಕ್ತಿಯೊಬ್ಬನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ನಂಜನಗೂಡು ತಾಲೂಕಿನ ಹಾದನೂರು ಒಡೆಯನಪುರದಲ್ಲಿ ನಡೆದಿದೆ.
    ಬಂಡೀಪುರ ರಾಷ್ಟ್ರೀಯ ಉದ್ಯಾನವನ ಅರಣ್ಯ ವ್ಯಾಪ್ತಿಗೆ ಒಳಪಡುವ ಒಡೆಯನಪುರ ಗ್ರಾಮದ ಪುಟ್ಟಸ್ವಾಮಿಗೌಡ (45) ಹಾಗು ಆತನಿಗೆ ಸೇರಿದ ಹಸು ಸ್ಥಳದಲ್ಲೇ ಸಾವಿಗೀಡಾಗಿದೆ.
    ಮೃತ ಪುಟ್ಟಸ್ವಾಮಿಗೌಡ ಪಕ್ಕದ ಜಮೀನಿನ ಸುನೀಲ್‌ ಕುಮಾರ್‌ ಹಾಗು ನಾಗರಾಜೇಗೌಡ ಒಡೆಯನಪುರ ಗ್ರಾಮದ ನಂಜನದೇವರ ಬೆಟ್ಟದ ಸಮೀಪದಲ್ಲಿನ ತಮ್ಮ ಜಮೀನಿನಲ್ಲಿ ದನ ಮೇಯಿಸುತ್ತಿದ್ದ ವೇಳೆ ತಂಬಾಕು ಬೆಳೆಯ ಮಧ್ಯೆ ಅಡಗಿ ಕುಳಿತಿದ್ದ ಹುಲಿ ಪುಟ್ಟಸ್ವಾಮಿ ಗೌಡ ಮೇಲೆ ದಾಳಿ ನಡೆಸಿದೆ.
    ನಂತರ ಮೃತ ಪುಟ್ಟಸ್ವಾಮಿಗೌಡರಿಗೆ ಸೇರಿದ ಹಸುವಿನ ಮೇಲೂ ದಾಳಿ ನಡೆಸಿ ಬಲಿ ಪಡೆದಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಯಡಿಯಾಲ ವ್ಯಾಪ್ತಿಯ ಆರ್‌ಎಫ್‌ಒ ಮಂಜುನಾಥ್‌, ವೈದ್ಯ ಡಾ. ರಮೇಶ್‌ಕುಮಾರ್‌, ಹುಲ್ಲಹಳ್ಳಿ ಪೊಲೀಸ್‌ ಠಾಣೆಯ ಎಸೈ ಕೃಷ್ಣಕಾಂತ್‌ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಆರ್‌ಎಫ್‌ಒ ಮಂಜುನಾಥ್‌ ಮಾತನಾಡಿ, ಜಮೀನಿನಲ್ಲಿ ಹುಲಿ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಅಲ್ಲದೆ ಹುಲಿ ದಾಳಿ ನಡೆಸಿರುವುದು ಖಾತ್ರಿಯಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಮೇಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುವರು. ಮೃತರ ಕುಟುಂಬಕ್ಕೆ ಸರ್ಕಾರದಿಂದ ದೊರಕುವ ಸೌಲಭ್ಯ ಮತ್ತು ಪರಿಹಾರವನ್ನು ಒದಗಿಸಿಕೊಡಲಾಗುವುದು ಎಂದರು.
    ಪ್ರತ್ಯಕ್ಷದರ್ಶಿ ಸುನೀಲ್‌ಕುಮಾರ್‌ ಮಾತನಾಡಿ, ಪುಟ್ಟಸ್ವಾಮಿಗೌಡ, ನಾಗರಾಜೇಗೌಡ ಮತ್ತು ನಾನು ದನ ಮೇಯಿಸುತ್ತಿದ್ದೆವು. ಈ ವೇಳೆ ಪುಟ್ಟಸ್ವಾಮಿಗೌಡ ಮೇಲೆ ಹುಲಿ ಏಕಾಏಕಿ ದಾಳಿ ನಡೆಸಿತು. ಈ ದೃಶ್ಯವನ್ನು ಕಣ್ಣಾರೆ ಕಂಡ ನಮಗೆ ಭಯದಿಂದ ಗಾಬರಿಗೊಂಡು ಓಡಿಹೋದೆವು. ನಮ್ಮನ್ನು ಹಿಂಬಾಲಿಸಿಕೊಂಡು ಹುಲಿ ಬಂದಿತು. ಈ ವೇಳೆ ಅಲ್ಲಿದ್ದ ಹಸುವಿನ ಮೇಲೆ ದಾಳಿ ನಡೆಸಿ ಹಸುವನ್ನೂ ಕೊಂದು ಹಾಕಿತು. ನಾವು ಪ್ರಾಣ ಭಯದಿಂದ ಓಡಿಹೋಗಿ ಸ್ವಲ್ಪ ಅಂತರದಲ್ಲಿ ಪಾರಾದೆವು ಎಂದರು. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್‌ಠಾಣೆಯಲ್ಲಿ ದೂರು ದಾಖಲಾಗಿದೆ.
    ಇಬ್ಬರು ಗಂಭೀರ:
    ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರದ ಬಳಿ ಇಬ್ಬರು ವ್ಯಕ್ತಿ​ಗ​ಳ ಮೇಲೆ ಹುಲಿ ದಾಳಿ ಮಾಡಿ, ಗಂಭೀರ ಗಾಯಗೊಳಿಸಿದ ಘಟನೆ ಶನಿವಾರ ನಡೆದಿದೆ. ತಾಲೂಕಿನ ಗೋಪಾಲಪುರ ಗ್ರಾಮದ ರೈತ ಗವಿಯಪ್ಪ(45) ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಹಸುವಿನ ಮೇಲೆ ಹುಲಿ ದಾಳಿ ಮಾಡಿದೆ. ಸನಿಹಕ್ಕೆ ಬಂದ ಗವಿಯಪ್ಪನ ಮೇಲೂ ಹುಲಿ ದಾಳಿ ಮಾಡಿ ಮುಖಕ್ಕೆ ಗಾಯಗೊಳಿಸಿದೆ. ರೈತನ ಚೀರಾಟ ಕಂಡು ಅಕ್ಕಪಕ್ಕದ ರೈತರು ಕೂಗಾಟ ನಡೆಸಿ ಬರುವುದನ್ನು ಕಂಡು ಹುಲಿ ಕಾಲ್ಕಿತ್ತು ಗವಿಯಪ್ಪನ ಜಮೀನಿನ ಬಳಿಯ ಶಿವಬಸಪ್ಪ ಬಾಳೆ ತೋಟಕ್ಕೆ ನುಗ್ಗಿದೆ.
    ಹುಲಿಯಿಂದ ಗಾಯಗೊಂಡ ರೈತ ಗವಿಯಪ್ಪರನ್ನು ಮೈಸೂರು ಬೃಂದಾವನ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.
    ಗೋಪಾಲಸ್ವಾಮಿ ಬೆಟ್ಟದ ವಲಯ ಅರಣ್ಯಾಧಿಕಾರಿ ಎನ್‌.ಪಿ.ನವೀನ್‌ಕುಮಾರ್‌ ಹಾಗು ಸಿಬ್ಬಂದಿ ಸ್ಥಳಕ್ಕಾಗಮಿಸಿದರು.
    ರೈತ ಶಿವಬಸಪ್ಪ ಅವರ ಜಮೀನಿನಲ್ಲಿದೆ ಎಂದು ನೂರಾರು ಜನರು ಜಮಾಯಿಸಿದ್ದು, ಈ ವೇಳೆ ಬಾಳೆತೋಟದಲ್ಲಿ ಹುಲಿ ನೋಡಲು ನಿಂತಿದ್ದ ಗೋಪಾಲಪುರ ಗ್ರಾಮದ ರಾಜಶೇಖರ್‌(32) ಮೇಲೂ ನಿನ್ನೆ ಸಂಜೆ ಹುಲಿ ದಾಳಿ ಮಾಡಿ ಗಾಯಗೊಳಿಸಿದೆ.

    gopalaswamy betta Mysore tiger attack
    Share. Facebook Twitter Pinterest LinkedIn Tumblr Email WhatsApp
    Previous Articleಮಸೂದ್ ಫಾಝಿಲ್ ಮನೆಗೂ ಹೋಗ್ತಾರಂತೆ ಸಿಎಂ.
    Next Article ತುಮಕೂರಿನಲ್ಲಿ‌ ಮಹಾರಾಷ್ಟ್ರ ಮೂಲದ ಶಂಕಿತ ಉಗ್ರ ವಶಕ್ಕೆ
    vartha chakra
    • Website

    Related Posts

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    ಧರ್ಮಸ್ಥಳಕ್ಕೆ ಬುರುಡೆ ಬಂದಿದ್ದು ಎಲ್ಲಿಂದ ಗೊತ್ತಾ ?

    ಆಗಷ್ಟ್ 25, 2025

    Comments are closed.

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ಸ್ಪೋಟಕ್ಕೆ ಬೆಚ್ಚಿದ ಬೆಂಗಳೂರು
    • Connietaups ರಲ್ಲಿ ಅವೀವಾ ಬಿದ್ದಪಗೆ ಇದು ಎರಡನೇ ಮದುವೆ!
    • Link ರಲ್ಲಿ ಅಭಿಮಾನಿಯನ್ನೇ ಕೊಲೆ ಮಾಡಿಸಿದ್ರಾ ನಟ ದರ್ಶನ್.?
    Latest Kannada News

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ‘ಗಜ’ಪಡೆ ಜೊತೆ ವಿಜಯಲಕ್ಷ್ಮಿ ದರ್ಶನ್
    Subscribe