ಮಂಡ್ಯ, ಜ.23 – ಬರೋಬರಿ 25 ಕೋಟಿ ಆಸೆ ತೋರಿಸಿ ಪೇಪರ್ ನೋಟು ಕೊಟ್ಟು 1.10 ಕೋಟಿ ರೂ ದೋಚಿ ಪರಾರಿಯಾಗಿರುವ ಘಟನೆ ಮಳವಳ್ಳಿ ತಾಲೂಕಿನ ಶಿಂಷಾಪುರ ಗ್ರಾಮದಲ್ಲಿ ನಡೆದಿದೆ.
ಸೂರ್ಯ ಎಂಬ ಅಪರಿಚಿತ ದುಷ್ಕರ್ಮಿ ಆಮಿಷವೊಡ್ಡಿ ಶಿಂಷಾಪುರದ ಮೇರಿ ಅವರಿಗೆ ವಂಚನೆ ಮಾಡಿದ್ದಾನೆ.ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ಯಾಲೋಮ್ ಎಜುಕೇಷನ್ ಚಾರಿಟಬಲ್ ಟ್ರಸ್ಟ್ ನಡೆಸುತ್ತಿದ್ದ ಮೇರಿ ಅವರಿಗೆ ಕರೆ ಮಾಡಿ ಶಿಕ್ಷಣ ಸಂಸ್ಥೆಗೆ ದೇಣಿಗೆ ಕೊಡುವ ಆಮಿಷವೊಡ್ಡಿ ದುಷ್ಕರ್ಮಿ ಸೂರ್ಯ ಪರಿಚಯವಾಗಿದ್ದ. ಟ್ರಸ್ಟ್ ಗೆ 25 ಕೋಟಿ ರೂ. ದೇಣಿಗೆ ಕೊಡುತ್ತೇನೆ. ಬದಲಿಗೆ ತೆರಿಗೆ ಕಟ್ಟಲು ನಗದು ರೂಪದಲ್ಲಿ 1.10 ಕೋಟಿ ನಗದು ಕೊಡುವಂತೆ ಸೂರ್ಯ ಬೇಡಿಕೆಯಿಟ್ಟಿದ್ದ. ಸೂರ್ಯನ ಮಾತು ನಂಬಿ ಮೇರಿ ಅವರು ಕಷ್ಟಪಟ್ಟು 1.10 ಕೋಟಿ ನಗದು ಹಣ ಹೊಂದಿಸಿದ್ದರು. ಬಳಿಕ ಕಾರೊಂದರಲ್ಲಿ ನಕಲಿ ನೋಟು ತುಂಬಿಕೊಂಡು ಮೇರಿ ಮನೆಗೆ ಬಂದಿದ್ದ ವಂಚಕ ಸೂರ್ಯ ಔಪಚಾರಿಕ ಮಾತುಗಳನ್ನಾಡುತ್ತಾ ಮನೆಯವರಿಗೆಲ್ಲ ತಾನೇ ತಂದಿದ್ದ ಜ್ಯೂಸ್ ಕುಡಿಸಿದ್ದಾನೆ. ನಂತರ ಕುಟುಂಬದವರೆಲ್ಲ ಪ್ರಜ್ಞೆ ತಪ್ಪುತ್ತಿದ್ದಂತೆ ಮೇರಿಯವರು ಕಷ್ಟಪಟ್ಟ ಅರೆಂಜ್ ಮಾಡಿದ್ದ ಹಣದೊಂದಿಗೆ ಪರಾರಿಯಾಗಿದ್ದಾನೆ.
ಪ್ರಜ್ಞೆ ಬಂದ ನಂತರ ಸೂರ್ಯನ ವಂಚನೆ ಬೆಳಕಿಗೆ ಬಂದಿದೆ. ತಕ್ಷಣ ಮೇರಿಯವರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು ವಂಚಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಮಳವಳ್ಳಿ ಡಿವೈಎಸ್ಪಿ ಪಿ.ಕೃಷ್ಣಪ್ಪ ನೇತೃತ್ವದಲ್ಲಿ ಆರೋಪಿ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ. ಪ್ರಕರಣ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
1 ಟಿಪ್ಪಣಿ
Мультимедийный интегратор Мультимедийный интегратор .