ಬೆಂಗಳೂರು – ಕರ್ನಾಟಕದ ಅತ್ಯಂತ ಪ್ರತಿಷ್ಠಿತ ಕಾರ್ಖಾನೆಗಳಲ್ಲಿ ಒಂದುಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್. ಮೈಸೂರಿನ ಅತ್ಯಂತ ದೂರದೃಷ್ಟಿಯುಳ್ಳ ಮಹಾರಾಜ ಎಂದೇ ಜನ ಮನ್ನಣೆ ಗಳಿಸಲ್ಪಟ್ಟಿರುವ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದರ್ಶಿತ್ವದ ಫಲವಾಗಿ 1937ರಲ್ಲಿ ಅಸ್ತಿತ್ವಕ್ಕೆ ಬಂದಿತು.
ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಅಳಿಸಲಾಗದ ಶಾಯಿ ತಯಾರಿಸುವ ದೇಶದ ಏಕೈಕ ಸಂಸ್ಥೆಯಾಗಿದ್ದು ವಿಶ್ವದ 30ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಅಳಿಸಲಾಗದ ಶಾಯಿಯನ್ನ ಪೂರೈಕೆ ಮಾಡುತ್ತಿದ್ದು ಇದು ರಾಜ್ಯದ ಹೆಮ್ಮೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಮತದಾನದ ನಂತರ ಹಾಕಲಾಗುವ ಅಳಿಸಲಾಗದ ಶಾಹಿ ಪೂರೈಕೆಯಿಂದ ಸಂಸ್ಥೆ ಅಪಾರ ಲಾಭ ಗಳಿಸುವತ್ತ ಸಾಗಿದೆ.
ಲೋಕಸಭಾ ಚುನಾವಣೆಗೆ ಸಂಸ್ಥೆ ಸುಮಾರು 26.55 ಲಕ್ಷ ಅಳಿಸಲಾಗದ ಶಾಯಿ ಪೂರೈಕೆ ಮಾಡಲಿದೆ. ಇದಕ್ಕಾಗಿ ಚುನಾವಣೆ ಆಯೋಗ ಬೇಡಿಕೆ ಮಂಡಿಸಿದ್ದು ಸುಮಾರು 55 ಕೋಟಿ ರೂಪಾಯಿ ವಹಿವಾಟು ಮಾಡಬಹುದು ಎಂದು ಅಂದಾಜಿಸಲಾಗಿದೆ.
ಮಾರ್ಚ್ 15ರೊಳಗೆ ದೇಶದ ಎಲ್ಲಾ ರಾಜ್ಯಗಳ ಚುನಾವಣಾ ಆಯುಕ್ತರ ಕಚೇರಿಗಳ ಬೇಡಿಕೆಗೆ ಅನುಗುಣವಾಗಿ ಅಳಿಸಲಾಗದ ಶಾಯಿ ಪೂರೈಕೆ ಮಾಡುವಂತೆ ಆದೇಶ ನೀಡಲಾಗಿದೆ.
10 ಎಂಎಲ್ ಬಾಟಲಿಯಿಂದ ಸುಮಾರು 700 ಮತದಾರರ ಬೆರಳಿಗೆ ಅಳಿಸಲಾಗದ ಶಾಯಿ ಗುರುತು ಹಾಕಬಹುದು ಎಂದು ಅಂದಾಜಿಸಲಾಗಿದ್ದು, ಅದರ ಆಧಾರದಲ್ಲಿ 26.55 ಬಾಟಲಿ ಶಾಹಿ ಪೂರೈಸುವಂತೆ ಚುನಾವಣೆ ಆಯೋಗ ಬೇಡಿಕೆ ಮಂಡಿಸಿದೆ.
ಈಗಾಗಲೇ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಗೋವಾ, ಅರುಣಾಚಲ ಪ್ರದೇಶ, ತ್ರಿಪುರ, ನಾಗಲ್ಯಾಂಡ್, ಮಿಜೋರಾಂ ರಾಜ್ಯಗಳಿಗೆ ಮೈಲ್ಯಾಕ್ ಆಡಳಿತ ವರ್ಗ ಅಳಿಸಲಾಗದ ಶಾಯಿಯನ್ನ ಪೂರೈಕೆ ಮಾಡಿದೆ.
3 ಪ್ರತಿಕ್ರಿಯೆಗಳು
buy clomid pill clomid prices in south africa where can i get generic clomiphene tablets clomiphene without rx buy clomiphene without prescription cost of generic clomid without rx clomid contraindications
This is a theme which is virtually to my callousness… Diverse thanks! Exactly where can I lay one’s hands on the contact details an eye to questions?
Thanks for sharing. It’s first quality.