Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮೋದಿಗೂ ಅದಾನಿಗೂ ಲವ್ವು – ಬೀದಿಗಿಳಿದ ಹತ್ತಿಪ್ಪತ್ತು ಹುಡುಗರ ಡವ್ವು
    ಬೆಂಗಳೂರು

    ಮೋದಿಗೂ ಅದಾನಿಗೂ ಲವ್ವು – ಬೀದಿಗಿಳಿದ ಹತ್ತಿಪ್ಪತ್ತು ಹುಡುಗರ ಡವ್ವು

    vartha chakraBy vartha chakraಫೆಬ್ರವರಿ 14, 2023Updated:ಫೆಬ್ರವರಿ 14, 2023123 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ವಿಶ್ವದಾದ್ಯಂತ ಪ್ರೇಮಿಗಳ ದಿನಾಚರಣೆ ಎಂದು ಪ್ರೀತಿ ವ್ಯಕ್ತ ಪಡಿಸುತ್ತಿರುವ ಇಂದು, ಫೆಬ್ರವರಿ 14ರಂದು, ರಾಜಧಾನಿ ಬೆಂಗಳೂರಿನ MG ರಸ್ತೆ, ಬ್ರಿಗೇಡ್ ರಸ್ತೆ (Brigade road) ಯಲ್ಲಿ ಮಟ ಮಟ ಮಧ್ಯಾಹ್ನ ಒಂದಿಪ್ಪತ್ತು ಜನ ಯುವಕರ ಗುಂಪು ಮೋದಿ ಹಾಗೂ ಅದಾನಿ ಅವರ ಚಿತ್ರಗಳಿರುವ ಫಲಕಗಳನ್ನು ಹಿಡಿದು ಗಮನ ಸೆಳೆಯಲು ಬೆವರಿಳಿಸಿದರು. ಯುವಕ ಯುವತಿಯರು ಪರಸ್ಪರ ಪ್ರೀತಿ ವ್ಯಕ್ತಪಡಿಸುವುದು ಇಂದಿನ ವಿಶೇಷ. ಹಾಗೆಯೇ ಸಿಂಗಲ್ ಇದ್ದೋ, ಡಬಲ್ ಇದ್ದೋ ತಮ್ಮ ಎಕ್ಸ್ ಅನ್ನು ಮರೆಯಲಾರದವರು ಅವರನ್ನು ಜ್ಞಾಪಿಸಿಕೊಳ್ಳುತ್ತಾ ಖುಷಿಯಿಂದ ಅಥವ ಬೇಸರದಿಂದ ದಿನ ಕಳೆಯುವುದು ವಾಡಿಕೆ.

    ಆದರೆ ಯಾರದೋ ಇಬ್ಬರ ಪ್ರೀತಿಯನ್ನು ಮೂರನೇಯವರಾದ ಅವರ ವಿರೋಧಿಗಳು ಸಂಭ್ರಮಿಸುತ್ತ, ಬಿಸಿಲಿನ ಬೇಗೆಯಲ್ಲಿ ಶಾಂತವಾಗಿ, ಕೈಯಲ್ಲಿ ರೆಡ್ ರೋಸ್ ಹಿಡಿದು, ಸೈಲೆಂಟ್ ಆಗಿ ಹೆಜ್ಜೆ ಹಾಕುವುದನ್ನು ಕಂಡ ಕೆಲವರಿಗೆ ಆಶ್ಚರ್ಯಕ್ಕಿಂತ ಅನುಕಂಪ ಬಂದಿದ್ದೆ ಹೆಚ್ಚು ಎನ್ನುವುದು ಅಲ್ಲಿ ಹಾದುಹೋಗುತ್ತಿದ್ದ ಪಾದಚಾರಿಗಳ ಹಾಗು ಸ್ಥಳೀಯರ ಅಲ್ಪಆಸಕ್ತಿ, ಅಷ್ಟೇ ಸೈಲೆಂಟ್ ಆಗಿ ವ್ಯಕ್ತಪಡಿಸಿದಂತಿತ್ತು.

    ಕರ್ನಾಟಕ ಯುವ ಕಾಂಗ್ರೆಸ್ ನ ಅಧ್ಯಕ್ಷ ಮೊಹಮ್ಮದ್ ನಳಪಾಡ್ (Mohammed Nalapad) ಅವರ ಮುಂದಾಳತ್ವದಲ್ಲಿ ನಡೆದ Modi – Adani ಪ್ರೇಮಾಚರಣೆ ಹಲವು ಪ್ರಶ್ನೆಗಳ ಆಗರವಾಗಿದ್ದ ಹಾಗಿತ್ತು. ನಳಪಾಡ್ ಅವರ Modi – Adani ನಂಟಿನ ಬಗೆಗಿನ ಹೇಳಿಕೆಗಳು, ಮೋದಿ ಮಾರ್ತಾರೆ, ಅದಾನಿ ಕೊಂಡುಕೊಳ್ತಾರೆ ಅನ್ನುವ ಆರೋಪಗಳು, ಅವರಿಬ್ಬರ ಪ್ರೀತಿಯಿಂದ ದೇಶದ ಸಂಪತ್ತು, ಜನಸಾಮಾನ್ಯರ ಹಣ ಸಂಪೂರ್ಣ ನಷ್ಟ ಆಗಿದೆ ಎನ್ನುವ ವಿಚಾರ ಅಭಿವ್ಯಕ್ತಿ ಸ್ವಾತಂತ್ರ್ಯದ ಒಂದು ಅಪಕ್ವ ಪ್ರಯೋಗದ ಬಡಪಾಯಿ ಪ್ರದರ್ಶನ ಇದ್ದಂತಿತ್ತು ಎನ್ನುವುದು ಅಲ್ಲಿ ಕಂಡ ಬೆರಳೆಣಿಕೆಯ ಜನರು ಇವರ ಪ್ರದರ್ಶನದ ಬಗ್ಗೆ ಗಾಳಿಯಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ.

    ಪ್ರೀತಿ ಪ್ರೇಮದ ಗುಂಗಿನಲ್ಲೇ ಇರುವ ಯುವಕರಿಗೆ ನಿಜವಾದ ರಾಜಕಾರಣ, ನಾಯಕತ್ವ ಕಾಣುವುದು ಯಾವಾಗ, ಕಷ್ಟಗಳ ಮೇಲೆ ಕಷ್ಟಗಳು ಜನಸಾಮಾನ್ಯರನ್ನು ಕಂಗೆಡಿಸಿರುವಾಗ ಒಂದು ರಾಷ್ಟ್ರೀಯ ಪಕ್ಷ ಎಂದು ಹೇಳಿಕೊಳ್ಳುವ, Congress ನ ರಾಜ್ಯ ಮಟ್ಟದ ಸ್ಥಾನ ಅಲಂಕರಿಸುವ ಪದಾಧಿಕಾರಿಯೊಬ್ಬರು ತಮ್ಮ ಬೆರಳೆಣಿಕೆಯ ಹಿಂಬಾಲಕರೊಂದಿಗೆ ಉತ್ತಮ ಪಾದಚಾರಿ ಮಾರ್ಗ ಇರುವ, ಪ್ರೀತಿಯ ಸಂದೇಶವನ್ನು ಸಾರಿದ ಮಹಾತ್ಮ ಗಾಂಧಿ ಅವರ ಹೆಸರಿನ ರಸ್ತೆಯ ಮೇಲೆ ನಡೆದದ್ದು ಆ ಪಕ್ಷದ ಹಿರಿಯ ನಾಯಕರ ಗಮನಕ್ಕೂ ಬಂತೋ ಇಲ್ಲವೋ ಎಂದೆನಿಸಿದ್ದು ಉತ್ಪ್ರೇಕ್ಷೆಯಲ್ಲ ಎನ್ನುವಂತಿತ್ತು.

    ಒಟ್ಟಿನಲ್ಲಿ ದ್ವೇಷ ಮಾಡಿ ಮಾಡಿ, ದ್ವೇಷಿಸಿದವರನ್ನು ಏನೂ ಮಾಡಲಾಗದಾದಾಗ, ದ್ವೇಷಿಸಿದವರ ಮೇಲೆಯೇ ಪ್ರೀತಿ ಹುಟ್ಟುತ್ತದೆ ಎನ್ನುವ ಮಾತನ್ನು ಕೇಳಿ, ನೋಡಿ, ಪ್ರೀತಿ ಉಕ್ಕಿ ಹರಿಯುವಾಗ ಕೈಯಲ್ಲಿ ಗುಲಾಬಿ ಇದ್ದರೂ ದೂರದ ಕಮಲದ ಮೇಲಿನ ಸೆಳೆತದಿಂದ ಕೆಸರೆರಚಲು ಬಿಳಿ ಬಟ್ಟೆ ತೊಟ್ಟು ಹೋಗುವುದು ಎಷ್ಟು ಸಮಂಜಸ ಎಂದು ಇದನ್ನು ನೋಡಿದ ಜನಸಾಮಾನ್ಯರ ಮನಸ್ಸಿನಲ್ಲಿ ಮೂಡಿದ್ದಂತೂ ನಿಜ ಎನ್ನಬಹುದು. ನರೇಂದ್ರನ ಹಿಂಸೆಗೆ ಮೊಹಮ್ಮದನ ಆವೇಶಕ್ಕೆ ಸಂತ ವ್ಯಾಲಂಟೈನ್ ನೂ ಸಹ ಕಾಲಕ್ಕೆ ತಕ್ಕ ಹಾಗೆ ಹೊಸದೊಂದು ಬಾಣವನ್ನು ಪ್ರಯೋಗಿಸಿದಂತಿತ್ತು ಇಂದಿನ ವಾತಾವರಣ ಎನ್ನುವುದು ಬ್ರಿಗೇಡ್ ರಸ್ತೆಯ ಕೆಲವು ಜಾಣರು ಆಡಿಕೊಂಡಂಥ ಮಾತು ಸತ್ಯವೇ ಎಂದು ಯೋಚಿಸಬೇಕೇ ಅಥವಾ ಪ್ರೀತಿಯ ನಶೆ ರಾತ್ರಿ ಬೆಳಗಾಗುವುದರೊಳಗೆ ಇಳಿಯುತ್ತದೆ ಎಂದು ತಿಳಿಯಬೇಕೆ ಎಂದು ಯೋಚಿಸಬೇಕು.

    Brigade road Congress ED Gautam Adani m m g road modi Modi - Adani Mohammed Nalapad narendra modi road valentines day ಅದಾನಿ ಕಾಂಗ್ರೆಸ್ ವ್ಯಾಪಾರ
    Share. Facebook Twitter Pinterest LinkedIn Tumblr Email WhatsApp
    Previous Article225 ಊರುಗಳಲ್ಲಿ Zomato ಸೇವೆ ಸ್ಥಗಿತ
    Next Article Congressನತ್ತ ಮುಖಮಾಡಿದ BJP ಶಾಸಕಿ
    vartha chakra
    • Website

    Related Posts

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    ಅಕ್ಟೋಬರ್ 7, 2025

    ಹೈಕಮಾಂಡ್ ಮುಂದೆ ಶಿವಕುಮಾರ್ ಗರಂ.

    ಅಕ್ಟೋಬರ್ 4, 2025

    ಜಾತಿ ಸಮೀಕ್ಷೆಯಲ್ಲಿ ಡಿಸಿಎಂ ಕೊಟ್ಟ ವಿವರ ಗೊತ್ತಾ.

    ಅಕ್ಟೋಬರ್ 4, 2025

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    ಹೈಕಮಾಂಡ್ ಮುಂದೆ ಶಿವಕುಮಾರ್ ಗರಂ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • video sex 18+ ರಲ್ಲಿ ಟೊಮ್ಯಾಟೋ ಸಾಲಕ್ಕಾಗಿ ಲ್ಯಾಪ್ ಟಾಪ್ ಕದ್ದ.
    • canadian pharmacy world reviews ರಲ್ಲಿ ಕರ್ನಾಟಕಕ್ಕೆ ಸಿದ್ದರಾಮಯ್ಯ ಹೆಸರಿಡಬೇಕಂತ
    • Jamesamoto ರಲ್ಲಿ ಹಿಂದೂ ಧರ್ಮ ಸಂಸ್ಥಾಪಕರು ಯಾರು? | Hinduism
    Latest Kannada News

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    ಅಕ್ಟೋಬರ್ 7, 2025

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    ಅಕ್ಟೋಬರ್ 7, 2025

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    ಅಕ್ಟೋಬರ್ 4, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    CSK ವಿರುದ್ಧ ಸಿಡಿದೆದ್ದ ಜಡೇಜಾ #varthachakra #csk #jadeja #dhoni #sanjusamson #viralvideo #facts #ipl
    Subscribe