ಬೆಂಗಳೂರು – ವಿಧಾನಸಭೆ ಚುನಾವಣೆ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿರುವಂತೆ ಕಾಂಗ್ರೆಸ್ ಪ್ರಚಾರ ತಂತ್ರದಲ್ಲಿ ಮಾಡಲಾಗಿರುವ ಕೆಲವು ಎಡವಟ್ಟುಗಳಿಂದಾಗಿ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. (Congress)
ಇಂತಹ ಎಡವಟ್ಟುಗಳು ಉಂಟಾಗಲು ಪ್ರಮುಖ ಕಾರಣ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ಎಐಸಿಸಿ ನಾಯಕ ಸುರ್ಜೇವಾಲ ಮತ್ತು ಅವರ ಆಪ್ತ ವಲಯ ಎಂದು ಕಾಂಗ್ರೆಸ್ಸಿನ ಕೆಲವರು ನಾಯಕರು ಆಪಾದಿಸುತ್ತಿದ್ದಾರೆ.
ರಾಜ್ಯದಲ್ಲಿ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಪ್ರಮುಖವಾಗಿ ಕಾಡುತ್ತಿತ್ತು. ಇದು ಕಾಂಗ್ರೆಸ್ ಪರವಾದ ವಾತಾವರಣ ಸೃಷ್ಟಿಯಾಗಲು ನೆರವಾಗಿತ್ತು. ಅದರಲ್ಲೂ ಕಾಂಗ್ರೆಸ್ (Congress) ಹಿಂದಿನಿಂದ ಸಂಘಟಿತವಾಗಿ ನಡೆಸಿಕೊಂಡು ಬಂದ ಪ್ರಚಾರ ತಂತ್ರಗಳು ಬಿಜೆಪಿ ವಿರುದ್ಧ ಜನಾಭಿಪ್ರಾಯವಾಗಿ ರೂಪಗೊಳ್ಳಲು ಸಹಕಾರಿಯಾಗಿದ್ದವು.
ಇದರಿಂದಾಗಿ ಕಾಂಗ್ರೆಸ್ (Congress) ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂಬ ವಾತಾವರಣ ನಿರ್ಮಾಣವಾಗಿತ್ತು ಆದರೆ ಕೊನೆಯ ಕ್ಷಣಗಳಲ್ಲಿ ಸುರ್ಜೇವಾಲ ಮತ್ತವರ ಆಪ್ತ ವಲಯ ಕೈಗೊಂಡ ನಿರ್ಧಾರಗಳು ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಅಡ್ಡಿಯಾಗಿವೆ ಎಂಬ ಆರೋಪ ಕೇಳಿಬಂದಿದೆ.
ಐದು ಗ್ಯಾರಂಟಿಗಳ ಮೂಲಕ ಕಾಂಗ್ರೆಸ್ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆದರೆ, ಪ್ರಣಾಳಿಕೆಯಲ್ಲಿ ಸುರ್ಜೇವಾಲ ಅವರು ವಿಶೇಷ ಆಸಕ್ತಿ ವಹಿಸಿ ಸೇರ್ಪಡೆ ಮಾಡಿದ ಭಜರಂಗದಳ ನಿಷೇಧ ವಿಚಾರ ಕಾಂಗ್ರೆಸ್ಗೆ ದೊಡ್ಡ ಮಟ್ಟದ ಹಿನ್ನಡೆ ಉಂಟುಮಾಡಿದೆ ಎಂದು ಆರೋಪಿಸಲಾಗಿದೆ.
ಬಿಜೆಪಿ ಮತ್ತು ಸಂಘ ಪರಿವಾರ ಕಾಂಗ್ರೆಸ್ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಮಾಡಲು ಭಜರಂಗದಳ ನಿಷೇಧ ವಿಚಾರ ಪ್ರಮುಖ ಅಸ್ತ್ರವಾಗಿ ಲಭಿಸಿದೆ. ಈ ವಿಷಯ ಬಹು ಸಂಖ್ಯಾತ ಸಮುದಾಯದ ಬೇಸರಕ್ಕೆ ಕಾರಣವಾಗಿದ್ದು ಅವರೆಲ್ಲ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಬೇಕು ಎನ್ನುವ ಅಭಿಪ್ರಾಯಕ್ಕೆ ಬರುವಂತಾಗಿದೆ. ಇದಕ್ಕೆ ಸುರ್ಜೇವಾಲ ಅವರು ಪ್ರಮುಖ ಕಾರಣ ಎಂದು ಹಲವಾರು ಮಂದಿ ಹಿರಿಯ ನಾಯಕರು ಆಪಾದಿಸುತ್ತಿದ್ದು ರಾಜ್ಯದಲ್ಲಿ ಒಂದು ವೇಳೆ ಕಾಂಗ್ರೆಸ್ ಗೆ ಹಿನ್ನಡೆ ಆದರೆ ಅದಕ್ಕೆ ಸುರ್ಜೆವಾಲ ಅವರೇ ಕಾರಣ ಎಂದು ಆರೋಪಿಸಲಾಗುತ್ತಿದೆ. (Congress)
ಸುರ್ಜೇವಾಲಾ ವಿರುದ್ಧ ಕಾಂಗ್ರೆಸ್ಸಿನ ಹಿರಿಯ ನಾಯಕರು ಮಾಡುತ್ತಿರುವ ಆರೋಪ ಇಲ್ಲಿಗೆ ನಿಂತಿಲ್ಲ. ಕಾಂಗ್ರೆಸ್ ಪಕ್ಷದ ಪರವಾಗಿ ಪತ್ರಿಕೆಗಳಿಗೆ ಜಾಹೀರಾತು ನೀಡುವ ವಿಚಾರದಲ್ಲೂ ಕೂಡ ಸುರ್ಜೇವಾಲಾ ಮಧ್ಯ ಪ್ರವೇಶಿಸಿ ನೀಡಿದ ನಿರ್ದೇಶನಗಳು ಪಕ್ಷದ ಹಿನ್ನಡೆಗೆ ಕಾರಣವಾಗುತ್ತಿವೆ ಎಂದು ಆರೋಪಿಸಲಾಗುತ್ತಿದೆ.
ಬಿಜೆಪಿ ವಿರುದ್ಧ ಹಾಗೂ ಕಾಂಗ್ರೆಸ್ ಪರವಾದ ಅಭಿಪ್ರಾಯಗಳನ್ನು ಬಿತ್ತರಿಸುವ ಮಾಧ್ಯಮ ಸಂಸ್ಥೆಗಳಿಗೆ ಕಾಂಗ್ರೆಸ್ ಪಕ್ಷದ ಜಾಹೀರಾತು ನಿರೀಕ್ಷಿತ ಪ್ರಮಾಣದಲ್ಲಿ ಸಿಕ್ಕಿಲ್ಲ. ಬದಲಿಗೆ ಅಗ್ರಲೇಖನಗಳಿಂದ ಹಿಡಿದು ಸಂಪಾದಕೀಯದವರೆಗೆ ಎಲ್ಲಾ ವಲಯದಲ್ಲೂ ಬಿಜೆಪಿ ಪರವಾಗಿ ಸುದ್ದಿ ಮಾಡುತ್ತಿರುವ ಮಾಧ್ಯಮ ಸಂಸ್ಥೆಗಳಿಗೆ ಭರಪೂರ ಜಾಹೀರಾತುಗಳನ್ನು ನೀಡಿದ್ದಾರೆ. ಇದರಿಂದ ಇದರಿಂದ ನಮಗೆ ಯಾವುದೇ ಪ್ರಯೋಜನವಾಗಿಲ್ಲ ಬದಲಿಗೆ ನಮ್ಮ ವಿರುದ್ಧದ ವರದಿಗಳನ್ನು ಮತ್ತಷ್ಟು ಮಾಡಿ ಅದನ್ನು ಇನ್ನಷ್ಟು ಹೆಚ್ಚು ಜನರಿಗೆ ತಲುಪಿಸುವ ಕೆಲಸವಾಗುತ್ತಿದೆ ಎಂದು ಆಪಾದಿಸುತ್ತಿದ್ದಾರೆ. (Congress)
ತಮ್ಮ ಪತ್ರಿಕೆಯಲ್ಲಿ ಸತತವಾಗಿ ಕಾಂಗ್ರೆಸ್ ವಿರುದ್ಧ ಸುದ್ದಿ ಮತ್ತು ಲೇಖನಗಳನ್ನು ಮಾಡುತ್ತಿರುವ ಪತ್ರಿಕೆಯ ಸಂಪಾದಕರೊಂದಿಗೆ ಆತ್ಮೀಯ ಒಡನಾಟ ಹೊಂದಿರುವ ಇವರು, ಅವರ ಮನೆಗೆ ಉಪಹಾರಕ್ಕೆ ತೆರಳುವ ಮೂಲಕ ಸುದ್ದಿ ಮಾಡಿದ್ದರು. ಇದೀಗ ಮತ್ತೊಮ್ಮೆ ಅದೇ ಪತ್ರಿಕೆಗೆ ಹೆಚ್ಚಿನ ಜಾಹೀರಾತು ನೀಡಲಾಗುತ್ತಿದೆ. ಇದರಿಂದ ಕಾಂಗ್ರೆಸ್ ಗೆ ಆಗುವ ಲಾಭಕ್ಕಿಂತ ಹಾನಿಯೇ ಹೆಚ್ಚು ಒಟ್ಟಾರೆಯಾಗಿ ಸುರ್ಜೇವಾಲ ಅವರ ನಿಲುವುಗಳು ಕಾಂಗ್ರೆಸ್ ಹಿನ್ನೆಡೆಗೆ ಕಾರಣವಾಗುವಂತಿದ್ದು ಪಕ್ಷಕ್ಕೆ ಹಿನ್ನಡೆಯಾದರೆ ಅವರೇ ಹೊಣೆ ಎಂದು ಆರೋಪಿಸಲಾಗುತ್ತಿದೆ. (Congress)
Also read.
`ರಾಧಿಕಾ’ ನಿರ್ಮಾಪಕರಿಂದ ಕಾವ್ಯಾಗೆ ‘ಶಾಸ್ತಿ’ ಧಿಡೀರ್ ಹೊರಕ್ಕೆ! Kavya Shastri