Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Kiss ಕೊಡುವ ಕಾಲ ಬಂದಿದೆ!
    ಮನರಂಜನೆ

    Kiss ಕೊಡುವ ಕಾಲ ಬಂದಿದೆ!

    vartha chakraBy vartha chakraJuly 11, 2023Updated:July 11, 202327 Comments2 Mins Read
    Facebook Twitter WhatsApp Pinterest LinkedIn Tumblr Email
    File photo
    Share
    Facebook Twitter LinkedIn Pinterest Email WhatsApp
    Verbattle
    Verbattle

    ಭಾರತೀಯರಲ್ಲಿ ಸಾಂಸ್ಕೃತಿಕ ಜಾಗೃತಿ ಆಗುತ್ತಿದ್ದರೂ ಸಿನಿಮಾ ಮತ್ತು ಟಿವಿ ಗಳಲ್ಲಿ ಒಂದಷ್ಟು ಸ್ವೇಚ್ಚಾಚಾರದ ನಡವಳಿಕೆಗಳು ಜಗಜ್ಜಾಹೀರಾಗಿ ನಡೆಯುತ್ತಾ ಬಂದಿವೆ. ಹಾಗೆ ಹೇಳಬೇಕೆಂದರೆ ವ್ಯಕ್ತಿ ಸ್ವಾತಂತ್ರ್ಯಕ್ಕೆ ಭಾರತದ ಯುವ ಜನತೆ ಹೆಚ್ಚಾಗಿ ಮಾರುಹೋಗುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದ್ದೆ. ನನ್ನಿಷ್ಟದ ಉಡುಗೆ ನನ್ನಿಷ್ಟದ ತೊಡುಗೆ ನನ್ನಿಷ್ಟದ ವ್ಯಕ್ತಿಯೊಂದಿಗೆ ಸಲುಗೆ ಎನ್ನುವಂತೆ ಯುವಜನಂತೆ ಒಂದಷ್ಟು ಸಮಾಜ ನಿರೂಪಿಸಿದ ನಡವಳಿಕೆಯ ನಿರ್ಬಂಧನೆಗಳಿಗೆ ವಿರುದ್ಧವಾಗಿ ನಡೆಯುತ್ತಿರುವಂತೆ ಕಂಡುಬರುತ್ತಿದೆಯಾದರು ಇನ್ನೂ ಕೂಡ ಭಾರತದಲ್ಲಿ ಕೌಟುಂಬಿಕ ವಾತಾವರಣದಲ್ಲಿ ಅಥವ ಸಾರ್ವಜನಿಕವಾಗಿ ನಡೆದುಕೊಳ್ಳುವಾಗ ಎಷ್ಟೇ ವ್ಯಕ್ತಿ ಸ್ವಾತಂತ್ರ್ಯವನ್ನು ಬಯಸುವ ಯುವಕ ಯುವತಿಯರೂ ಕೂಡ ಒಂದಷ್ಟು ಎಲ್ಲೆ ಮೀರದ ರೀತಿಯಲ್ಲಿ ವರ್ತಿಸುವುದನ್ನು ಎಲ್ಲರೂ ಕಾಣಬಹುದು.

    ಹಾಗೇ ಸಿನಿಮಾದಲ್ಲೂ ಕೂಡ ಮೈ ಕೈ ಸೋಕಿಸಿಕೊಂಡು ಹೆಣೆಯಾಡುವ ನೃತ್ಯಗಳು ಸಿನಿಮಾದ ಆರಂಭಕಾಲದಿಂದಲೂ ಕನ್ನಡ ಭಾಷೆಯ ಚಿತ್ರ ಲೋಕದಲ್ಲೂ ಕಂಡುಬಂದಿದ್ದರೂ ಕನ್ನಡ ಟಿವಿ ಕಾರ್ಯಕ್ರಮಗಳು ಮಾತ್ರ ಇತ್ತೀಚಿನವರೆಗೂ ಬಹಳಷ್ಟು ಸಭ್ಯತೆಯ ಪರಿಧಿಯೊಳಗೇ ಇದ್ದಂತೆ ಪ್ರಸ್ತುತಗೊದಿಂದ್ದವು. ಹಿಂದಿ ಭಾಷೆಯ ರಿಯಾಲಿಟಿ ಶೋಗಳಲ್ಲಿ ಅಪ್ಪಿಕೊಳ್ಳುವುದು ಮುದ್ದಾಡುವುದು ಮುತ್ತು ಕೊಡುವುದು ಪೋಲಿ ಪೋಲಿಯಾಗಿ ಮಾತನಾಡುವುದು ಎಲ್ಲ ಹೆಚ್ಚುತ್ತಿರುವ ಈ ಕಾಲದಲ್ಲಿ ಕನ್ನಡ ಭಾಷೆಯ ಕಾರ್ಯಕ್ರಮಗಳಲ್ಲೂ ಒಂದಷ್ಟು ಇಂಥ ಮೈಚಳಿ ಬಿಟ್ಟು ನಡೆಸುವ ಚಟುವಟಿಕೆಗಳು ತೋರಿಸಲ್ಪಡುವ ಪ್ರಯತ್ನಕ್ಕೆ ಪೀಠಿಕೆ ಶುರುವಾದಂತಿದೆ. ವೀಕ್ಷಕರನ್ನು ಅಂತ ಸನ್ನಿವೇಶಗಳನ್ನೂ ನೋಡಲು ಒಗ್ಗಿಸುವ ಪ್ರಯತ್ನವೆಂಬಂತೆ ಆಗಾಗ ಒಂದಷ್ಟು ಹೀರೋ ಹೀರೋಯಿನ್ ಮಧ್ಯೆ ವಿಪರೀತ ಸಲುಗೆ ಹೀರೋ ಮುತ್ತು ಬೇಕೆಂದು ಪೀಡಿಸುವುದು ಹೀರೋಯಿನ್ ನನ್ನು ಚುಂಬಿಸಲು ಪ್ರಯತ್ನಿಸುವುದು, ಮೋಸದಿಂದ ಮುತ್ತು ಪಡೆಯುವುದು ಎಲ್ಲಾ ನಡೆಯುತ್ತಿತ್ತು.

    ಆದರೆ ಈಗ ಕನ್ನಡ ಟಿವಿ ಸೀರಿಯಲ್ ಗಳಲ್ಲಿ ಅದೆಲ್ಲ ಬಹಳ ಮುಂದೆ ಹೋಗಿ ಈಗ ಹೀರೋ ಹೀರೋಯಿನ್ ಗೆ ಕ್ಯಾಮಾರಕ್ಕೆ ಮರೆಯಾಗಿ ಮುತ್ತು ಕೊಡುತ್ತಿರುವುದು ಮುತ್ತು ಕೊಡಲು ಇಡೀ ಕುಟುಂಬವೇ ಪ್ರೇರೇಪಿಸುವುದು, ಹೀರೋ ಹೀರೋಯಿನ್ ನ ತುಟಿಯನ್ನು ಮುಟ್ಟುವುದು ತುಟಿಗಳನ್ನು ಹಿಸುಕುವುದು, ತುಟಿಯ ಮೇಲೆ ಬೆರಳುಗಳನ್ನು ಓಡಾಡಿಸುವುದು ನಡೆಯುತ್ತದೆ ಇದೆ. ಇದೆಲ್ಲ ಕೆಲವೊಂದು ಸೀರಿಯಲ್ ಗಳಲ್ಲಿ ತುಂಬಾನೇ ನಡೆದುಬಿಟ್ಟಿರುತ್ತದೆ.

    ಇದೆಲ್ಲ ನೋಡುತ್ತಿದ್ದರೆ ಮತ್ತು ಸೀರಿಯಲ್ ಗಳ ಸಂಭಾಷಣೆಯನ್ನು ಹಾಗು ಅದರಲ್ಲೂ ಕನ್ನಡ ರಿಯಾಲಿಟಿ ಶೋನಲ್ಲಿ ಪೋಲಿ ಸಂಭಾಷಣೆಗಳನ್ನು ಕೇಳಿದರೆ ಇನ್ನು ಮುಂದೆ ಸೀರಿಯಲ್ ಗಳಲ್ಲಿ ಪ್ರಸ್ಥದ ಪ್ರಸ್ತಾಪ ಮಾತ್ರವಲ್ಲದೆ ಮೊದಲ ರಾತ್ರಿಯಲ್ಲಿ ಕೋಣೆಯೊಳಗಿನ ವಿದ್ಯಮಾನಗಳನ್ನು ಸ್ಪಷ್ಟವಾಗಿ ತೋರಿಸುವ ಕಾಲ ಬರುತ್ತಿರುವಂತೆ ಗೋಚರಿಸುತ್ತಿದೆ. ಆದರೆ ಅದಕ್ಕಿಂತ ಮೊದಲೇ ಹೀರೋ ಹೀರೋಯಿನ್ ಗಳು ಮನೆಯೊಳಗಿನ ಸಭ್ಯ ಕುಟುಂಬದ ಟಿವಿ ಪರದೆಯಲ್ಲಿ ಒಂದಿಷ್ಟೂ ಸಂಕೋಚವಿಲ್ಲದೆ ತುಟಿಗೆ ತುಟಿ ಇಟ್ಟು ಚುಂಬಿಸುವ ಕಾಲ ಬರುವಂತಿದೆ. ವೀಕ್ಷಕ ಮಹನೀಯರು ಸಿದ್ದರಾಗಬೇಕಷ್ಟೆ!

    Verbattle
    Verbattle
    Verbattle
    ಸಿನಿಮ
    Share. Facebook Twitter Pinterest LinkedIn Tumblr Email WhatsApp
    Previous Articleಈ Traffic Jamಗೆ ಪರಿಹಾರವಿಲ್ಲವೆ?
    Next Article ಮೋದಿ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ವೇದಿಕೆ
    vartha chakra
    • Website

    Related Posts

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    January 23, 2026

    ಜನರ ಆಸ್ತಿ ಕಾರ್ಪೊರೇಟ್ ಪಾಲು: ಇದು ಅಭಿವೃದ್ಧಿಯೋ ಅಥವಾ ಅಪಾಯದ ಮುನ್ಸೂಚನೆಯೋ?

    January 22, 2026

    ಐಜಿಪಿ ರಾಮಚಂದ್ರರಾವ್ ಗೆ ಮತ್ತೊಂದು ಸಂಕಷ್ಟ.

    January 22, 2026

    Leave A Reply Cancel Reply

    Verbattle
    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

    ಮತ್ತೆ ಬೆಂಗಳೂರಿನ ರಸ್ತೆಗಿಳಿಯಲಿವೆ ಬೈಕ್ ಟ್ಯಾಕ್ಸಿಗಳು

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    ಜನರ ಆಸ್ತಿ ಕಾರ್ಪೊರೇಟ್ ಪಾಲು: ಇದು ಅಭಿವೃದ್ಧಿಯೋ ಅಥವಾ ಅಪಾಯದ ಮುನ್ಸೂಚನೆಯೋ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • RicardoCor on ಕೃಷಿ ಅಧಿಕಾರಿಗಳಿಗೆ ಚಲುವರಾಯಸ್ವಾಮಿ ಎಚ್ಚರಿಕೆ.
    • Daviddek on ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದವರಿಗೆ 6 ಕೋಟಿ ರೂ. ನಗದು ಬಹುಮಾನ
    • kvartira-borisovpoisk on ನವಜಾತ ಶಿಶುಗಳ ಮಾರಾಟ ಜಾಲದಲ್ಲಿ ನಕಲಿ ವೈದ್ಯ | Child Trafficking Racket
    Latest Kannada News

    ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

    January 23, 2026

    ಮತ್ತೆ ಬೆಂಗಳೂರಿನ ರಸ್ತೆಗಿಳಿಯಲಿವೆ ಬೈಕ್ ಟ್ಯಾಕ್ಸಿಗಳು

    January 23, 2026

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    January 23, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.