ನವದೆಹಲಿ:
ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಮರ್ಥವಾಗಿ ಕಟ್ಟಲು ನೆರವಾಗುವ ಸೇವಾದಳವನ್ನು ಪುನರ್ ಸಂಘಟಿಸಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಪರ್ಯಾಯವಾಗಿ ಜಾತ್ಯತೀತ ತತ್ವಗಳ ಪ್ರತಿಪಾದನೆ ಹಾಗೂ ಸೇವೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಖಿಲ ಭಾರತ ಮಟ್ಟದಲ್ಲಿ ಸೇವಾದಳ ಪುನರ್ ಸಂಘಟಿಸಲು ಯೋಜನೆ ರೂಪಿಸಲಾಗಿದೆ.
ಸೇವಾದಳವನ್ನು ಸಾಂಸ್ಕೃತಿಕ ಸಂಘಟನೆಯಾಗಿ ಪುನರ್ ಸಂಘಟಿಸಲು ನಿಯೋಜನೆಗೊಂಡಿರುವ ಹಿರಿಯ ಕಾಂಗ್ರೆಸ್ ನಾಯಕ ಲಾಲ್ ಜಿ ದೇಸಾಯಿ ಇದೀಗ ಕರ್ನಾಟಕ ಸೇವಾದಳ ಘಟಕವನ್ನು ವಿಸರ್ಜಿಸಿದ್ದಾರೆ.
ರಾಜ್ಯ ಸೇವಾದಳ ಘಟಕದ ಜೊತೆಗೆ ಸೇವಾದಳ ಮಹಿಳಾ ರಾಜ್ಯ ಘಟಕ ಮತ್ತು ಯುವ ಘಟಕವನ್ನು ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ.ನೂತನ ಘಟಕಗಳನ್ನು ರಚಿಸಲು ಅನುಕೂಲವಾಗುವಂತೆ ಹಾಲಿ ಇರುವ ಘಟಕಗಳನ್ನು ವಿಸರ್ಜಿಸಲಾಗಿದೆ
Previous Articleಚಿನ್ನದ ವ್ಯಾಪಾರಿಯ ಖತರ್ನಾಕ್ ಐಡಿಯಾ!
Next Article ಹಿಂದೂಗಳು ಮೂರು ಮಕ್ಕಳನ್ನು ಹೆರಬೇಕಂತೆ!

