ಬೆಂಗಳೂರು,ಜೂ.21- ಶೌಚಾಲಯಕ್ಕೆ ಹೋಗುವ ನೆಪದಲ್ಲಿ ಮಹಿಳಾ ಪೇದೆಯೊಬ್ಬರನ್ನು ತಳ್ಳಿ ಪೊಲೀಸ್ ಕಸ್ಟಡಿಯಲ್ಲಿದ್ದ ಬಾಲಕಿ ಪರಾರಿಯಾಗಿರುವ ಘಟನೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಬಾಲಕಿ ಕಾಣೆಯಾಗಿದ್ದು, ಪ್ರಕಾಶ್ ಎಂಬಾತ ಅಪಹರಿಸಿದ್ದಾನೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಬಾಲಕಿಯನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಸಿದ್ದಾಪುರದಲ್ಲಿರುವ ಬಾಲಮಂದಿರದಲ್ಲಿ ಆಕೆಯನ್ನು ಬಿಡಲಾಗಿತ್ತು. ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಬಾಲಕಿ ತಂದೆಯು ಆರೋಪಿಸಿದ್ದು ಲೈಂಗಿಕ ದೌರ್ಜನ್ಯ ನಡೆದಿದೆಯೇ? ಎಂಬುದನ್ನು ಖಾತ್ರಿ ಪಡಿಸಲು ಮಹಿಳಾ ಪೇದೆಯು ಬಾಲಕಿಯನ್ನು ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದರು.
ವೈದ್ಯಕೀಯ ಪರೀಕ್ಷೆ ಬಳಿಕ ಮತ್ತೆ ಕೆಲವು ಪರೀಕ್ಷೆ ಮಾಡಬೇಕೆಂದು ಹೇಳಿ ಮತ್ತೊಂದು ದಿನ ಕರೆದುಕೊಂಡು ಬರುವಂತೆ ವೈದ್ಯರು ಸೂಚಿಸಿದ್ದರು. ಬಾಲಕಿಯನ್ನು ವಾಪಸ್ ಬಾಲಮಂದಿರಕ್ಕೆ ಕರೆದೊಯ್ಯುವಾಗ ಆಕೆ, ನನಗೆ ವಾಂತಿ ಬರುತ್ತಿದ್ದು, ಶೌಚಾಲಯಕ್ಕೆ ಹೋಗಬೇಕೆಂದು ಹೇಳಿ ಸಮಯ ನೋಡಿ ಮಹಿಳಾ ಪೇದೆಯನ್ನು ದೂರ ತಳ್ಳಿ ಪರಾರಿಯಾಗಿದ್ದು ಆಕೆಯ ಪತ್ತೆಗೆ ಶೋಧ ನಡೆಸಲಾಗಿದೆ.
Previous Articleದೇಶದಲ್ಲಿ 9,923 ಜನರಿಗೆ ಕೊರೋನಾ ಸೋಂಕು, 17 ಮಂದಿ ಸಾವು
Next Article ಗೋಲ್ಗುಂಬಜ್ ಬಳಿ ಬುರ್ಕಾ, ಹಿಜಾಬ್ ಧರಿಸಿ ಯೋಗಾಭ್ಯಾಸ